8 ನೇ ರಾಜ್ಯ ಮಟ್ಟದ ಸಾಹಿತ್ಯೋತ್ಸವ
13 ಮೇ, 2017, ಶನಿವಾರ
ಕೆರೆಕೋಣ
ಮೇ 13, 2017 ರಂದು ಶನಿವಾರ ರಾಜ್ಯ ಮಟ್ಟದ ಸಹಯಾನ ಸಾಹಿತ್ಯೋತ್ಸವವನ್ನು ಹೊನ್ನಾವರ ತಾಲೂಕಿನ ಕೆರೆಕೋಣದಲ್ಲಿ ಏರ್ಪಡಿಲಾಗುತ್ತಿದೆ. “ನಾಡು ನುಡಿಯ ಪುನರ್ ನಿರೂಪಣೆ: ಹೊಸ ತಲೆಮಾರು” ಎನ್ನುವ ವಿಷಯದ ಮೇಲೆ 8 ನೇ ರಾಜ್ಯ ಮಟ್ಟದ ಸಾಹಿತ್ಯೋತ್ಸವ ನಡೆಯುತ್ತಿದ್ದು ಸರ್ವಾಧ್ಯಕ್ಷರಾಗಿ ಖ್ಯಾತ ವಿಮರ್ಶಕರು, ಸಾಹಿತ್ಯ ಸಂಸ್ಕøತಿ ಚಿಂತಕರಾದ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರೊಫೆಸರ್ ಡಾ. ಶಿವರಾಮ ಪಡಿಕಲ್ ಅವರನ್ನು ಆಯ್ಕೆ ಮಾಡಲಾಗಿದೆ.
ಸರ್ವಾಧ್ಯಕ್ಷತೆ ವಹಿಸಿಕೊಳ್ಳುತ್ತಿರುವ ಡಾ. ಶಿವರಾಮ ಪಡಿಕ್ಕಲ್ ಅವರು ಮೂಲತಃ ದಕ್ಷಿಣ ಕನ್ನಡದವರು. ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯದ ಅನ್ವಯಿಕ ಭಾಷಾ ವಿಜ್ಞಾನ ಮತ್ತು ಭಾಷಾಂತರ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ತಮ್ಮ ಎಂ.ಎ ವಿದ್ಯಾಭ್ಯಾಸವನ್ನು ಮಾಡಿದ ಅವರು ಮಂಗಳೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದರು. ‘ನಾಡು ನುಡಿಯ ರೂಪಕ: ರಾಷ್ಟ್ರ, ಆಧುನಿಕತೆ ಮತ್ತು ಕನ್ನಡದ ಮೊದಲ ಕಾದಂಬರಿಗಳು’ ಎನ್ನುವುದು ಇವರ ಮೊದಲ ಸಂಶೋಧನಾ ಗ್ರಂಥ.
ಸಾರಾ ಅಬೂಬಕರ್ ಅವರ ಚಂದ್ರಗಿರಿಯ ತೀರದಲ್ಲಿ ಕಾದಂಬರಿಯನ್ನು ಪದ್ಮಾಕರ್ ದಾಡೇಗಾಂವ್ಕರ್ ಅವರೊಂದಿಗೆ ಸೇರಿ ಮರಾಠಿ ಭಾಷೆಗೆ ಅನುವಾದಿಸಿದ್ದಾರೆ. ಪ್ರೊ. ಉದಯನಾರಾಯಣ ಸಿಂಗ್ ಜೊತೆ ಸುನೀತಿ ಕುಮಾರ್ ಚಟರ್ಜಿ; ಎ ಸೆಂಟಿನರಿ ಟ್ರಿಬ್ಯೂಟ್ ಎನ್ನುವ ಪುಸ್ತಕವನ್ನು ಸಾಹಿತ್ಯ ಅಕಾಡೆಮಿಗಾಗಿ ಹಾಗೂ ತಾರಿಖ್ ಖಾನ್ ಜೊತೆಗೆ ವಾಗರ್ಥ ಕೃತಿಯನ್ನು ಹೈದರಾಬಾದ್ ವಿಶ್ವವಿದ್ಯಾನಿಲಯಕ್ಕಾಗಿ ಸಂಪಾದಿಸಿದ್ದಾರೆ.
ಅಕಾಡೆಮಿಯು ಪ್ರಕಟಿಸಿದ ಬಾರತೀಯ ಸಾಹಿತ್ಯಗಳ ಚರಿತ್ರೆಯ ಸಂಪನ್ಮೂಲ ವ್ಯಕ್ತಿಯಾಗಿ ಅವರು ಕನ್ನಡವನ್ನು ಪ್ರತಿನಿಧಿಸಿದ್ದಾರೆ. ಕನ್ನಡದ ಮೊಟ್ಟಮೊದಲ ಸ್ವತಂತ್ರ ಸಾಮಾಜಿಕ ಕಾದಂಬರಿ ಇಂದಿರಾಬಾಯಿಯ ಇಂಗ್ಲೀಷ್ ಅನುವಾದವನ್ನು ಸಧ್ಯದಲ್ಲೇ ಆಕ್ಸಫರ್ಡ ಯೂನಿವರ್ಸಿಟಿ ಪ್ರೆಸ್ ಪ್ರಕಟಿಸಲಿದೆ. ಇದನ್ನು ಇವರು ವನಮಾಲಾ ವಿಶ್ವನಾಥ ಅವರೊಂದಿಗೆ ಸೇರಿ ಭಾಷಾಂತರಿಸಿದ್ದಾರೆ. ಆಧುನಿಕ ಕನ್ನಡ ಸಾಹಿತ್ಯ, ಭಾಷಾಂತರ, ವಸಾಹತೋತ್ತರ ವಿಮರ್ಶೆ, ಸಾಂಸ್ಕøತಿಕ ಅಧ್ಯಯನ ವಿಷಯಗಳಲ್ಲಿ ಅಕೆಡಮಿಕ್ ಆಸಕ್ತಿ ಹೊಂದಿರುವಕಿವರು ಆ ಕುರಿತು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ವಿದ್ವತ್ ಪೂರ್ಣ ಲೇಖನಗಳನ್ನು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಪತ್ರಿಕೆಗಳಿಗಾಗಿ ಬರೆದಿದ್ದಾರೆ.
ಇವರು ಬಿ.ಎಚ್.ಶ್ರೀಧರ ಪ್ರಶಸ್ತಿ ಮತ್ತು ವಿ.ಎಂ. ಇನಾಂದಾರ್ ವಿಮರ್ಶಾ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇಂಥ ಮಹ್ವದ ಸಾಹಿತ್ಯ ಸಂಸ್ಕøತಿಯ ಚಿಂತಕರಾದ ಡಾ. ಶಿವರಾಮ ಪಡಿಕ್ಕಲ್ ಅವರು ಸಹಯಾನ ಸಾಹಿತ್ಯೋತ್ಸವದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವುದು ಸಂತೋಷದ ಸಂಗತಿ.
ಡಾ. ಆರ್.ವಿ.ಭಂಡಾರಿಯವರ ನೆನಪಿನಲ್ಲಿ ಒಂದು ಸಾಂಸ್ಕøತಿಕ ಕೇಂದ್ರ ಕಟ್ಟುವ ಜವಾಬ್ದಾರಿಯ ಭಾಗವಾಗಿ ಅವರದೇ ಮನೆಯಂಗಳದಲ್ಲಿ ನಡೆಯುವ ಈ ಉತ್ಸವದಲ್ಲಿ ತಾವು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿ ‘ಸಹಯಾನ’ದ ಅಧ್ಯಕ್ಷರಾದ ಶಾಂತಾರಾಮ ನಾಯಕ ಹಿಚ್ಕಡ, ಕಾರ್ಯಾಧ್ಯಕ್ಷರಾದ ವಿಷ್ಣು ನಾಯ್ಕ, ಕಾರ್ಯದರ್ಶಿ ವಿಠ್ಠಲ ಭಂಡಾರಿ, ಕೆರೆಕೋಣ, ಖಜಾಂಚಿ ಮಾಸ್ತಿ ಗೌಡ ಅವರು ವಿನಂತಿಸಿದ್ದಾರೆ.
13 ಮೇ, 2017, ಶನಿವಾರ
ಕೆರೆಕೋಣ
ಸರ್ವಾಧ್ಯಕ್ಷರಾಗಿ ಡಾ. ಶಿವರಾಮ ಪಡಿಕ್ಕಲ್
ಮೇ 13, 2017 ರಂದು ಶನಿವಾರ ರಾಜ್ಯ ಮಟ್ಟದ ಸಹಯಾನ ಸಾಹಿತ್ಯೋತ್ಸವವನ್ನು ಹೊನ್ನಾವರ ತಾಲೂಕಿನ ಕೆರೆಕೋಣದಲ್ಲಿ ಏರ್ಪಡಿಲಾಗುತ್ತಿದೆ. “ನಾಡು ನುಡಿಯ ಪುನರ್ ನಿರೂಪಣೆ: ಹೊಸ ತಲೆಮಾರು” ಎನ್ನುವ ವಿಷಯದ ಮೇಲೆ 8 ನೇ ರಾಜ್ಯ ಮಟ್ಟದ ಸಾಹಿತ್ಯೋತ್ಸವ ನಡೆಯುತ್ತಿದ್ದು ಸರ್ವಾಧ್ಯಕ್ಷರಾಗಿ ಖ್ಯಾತ ವಿಮರ್ಶಕರು, ಸಾಹಿತ್ಯ ಸಂಸ್ಕøತಿ ಚಿಂತಕರಾದ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರೊಫೆಸರ್ ಡಾ. ಶಿವರಾಮ ಪಡಿಕಲ್ ಅವರನ್ನು ಆಯ್ಕೆ ಮಾಡಲಾಗಿದೆ.
ಸರ್ವಾಧ್ಯಕ್ಷತೆ ವಹಿಸಿಕೊಳ್ಳುತ್ತಿರುವ ಡಾ. ಶಿವರಾಮ ಪಡಿಕ್ಕಲ್ ಅವರು ಮೂಲತಃ ದಕ್ಷಿಣ ಕನ್ನಡದವರು. ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯದ ಅನ್ವಯಿಕ ಭಾಷಾ ವಿಜ್ಞಾನ ಮತ್ತು ಭಾಷಾಂತರ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ತಮ್ಮ ಎಂ.ಎ ವಿದ್ಯಾಭ್ಯಾಸವನ್ನು ಮಾಡಿದ ಅವರು ಮಂಗಳೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದರು. ‘ನಾಡು ನುಡಿಯ ರೂಪಕ: ರಾಷ್ಟ್ರ, ಆಧುನಿಕತೆ ಮತ್ತು ಕನ್ನಡದ ಮೊದಲ ಕಾದಂಬರಿಗಳು’ ಎನ್ನುವುದು ಇವರ ಮೊದಲ ಸಂಶೋಧನಾ ಗ್ರಂಥ.
ಸಾರಾ ಅಬೂಬಕರ್ ಅವರ ಚಂದ್ರಗಿರಿಯ ತೀರದಲ್ಲಿ ಕಾದಂಬರಿಯನ್ನು ಪದ್ಮಾಕರ್ ದಾಡೇಗಾಂವ್ಕರ್ ಅವರೊಂದಿಗೆ ಸೇರಿ ಮರಾಠಿ ಭಾಷೆಗೆ ಅನುವಾದಿಸಿದ್ದಾರೆ. ಪ್ರೊ. ಉದಯನಾರಾಯಣ ಸಿಂಗ್ ಜೊತೆ ಸುನೀತಿ ಕುಮಾರ್ ಚಟರ್ಜಿ; ಎ ಸೆಂಟಿನರಿ ಟ್ರಿಬ್ಯೂಟ್ ಎನ್ನುವ ಪುಸ್ತಕವನ್ನು ಸಾಹಿತ್ಯ ಅಕಾಡೆಮಿಗಾಗಿ ಹಾಗೂ ತಾರಿಖ್ ಖಾನ್ ಜೊತೆಗೆ ವಾಗರ್ಥ ಕೃತಿಯನ್ನು ಹೈದರಾಬಾದ್ ವಿಶ್ವವಿದ್ಯಾನಿಲಯಕ್ಕಾಗಿ ಸಂಪಾದಿಸಿದ್ದಾರೆ.
ಅಕಾಡೆಮಿಯು ಪ್ರಕಟಿಸಿದ ಬಾರತೀಯ ಸಾಹಿತ್ಯಗಳ ಚರಿತ್ರೆಯ ಸಂಪನ್ಮೂಲ ವ್ಯಕ್ತಿಯಾಗಿ ಅವರು ಕನ್ನಡವನ್ನು ಪ್ರತಿನಿಧಿಸಿದ್ದಾರೆ. ಕನ್ನಡದ ಮೊಟ್ಟಮೊದಲ ಸ್ವತಂತ್ರ ಸಾಮಾಜಿಕ ಕಾದಂಬರಿ ಇಂದಿರಾಬಾಯಿಯ ಇಂಗ್ಲೀಷ್ ಅನುವಾದವನ್ನು ಸಧ್ಯದಲ್ಲೇ ಆಕ್ಸಫರ್ಡ ಯೂನಿವರ್ಸಿಟಿ ಪ್ರೆಸ್ ಪ್ರಕಟಿಸಲಿದೆ. ಇದನ್ನು ಇವರು ವನಮಾಲಾ ವಿಶ್ವನಾಥ ಅವರೊಂದಿಗೆ ಸೇರಿ ಭಾಷಾಂತರಿಸಿದ್ದಾರೆ. ಆಧುನಿಕ ಕನ್ನಡ ಸಾಹಿತ್ಯ, ಭಾಷಾಂತರ, ವಸಾಹತೋತ್ತರ ವಿಮರ್ಶೆ, ಸಾಂಸ್ಕøತಿಕ ಅಧ್ಯಯನ ವಿಷಯಗಳಲ್ಲಿ ಅಕೆಡಮಿಕ್ ಆಸಕ್ತಿ ಹೊಂದಿರುವಕಿವರು ಆ ಕುರಿತು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ವಿದ್ವತ್ ಪೂರ್ಣ ಲೇಖನಗಳನ್ನು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಪತ್ರಿಕೆಗಳಿಗಾಗಿ ಬರೆದಿದ್ದಾರೆ.
ಇವರು ಬಿ.ಎಚ್.ಶ್ರೀಧರ ಪ್ರಶಸ್ತಿ ಮತ್ತು ವಿ.ಎಂ. ಇನಾಂದಾರ್ ವಿಮರ್ಶಾ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇಂಥ ಮಹ್ವದ ಸಾಹಿತ್ಯ ಸಂಸ್ಕøತಿಯ ಚಿಂತಕರಾದ ಡಾ. ಶಿವರಾಮ ಪಡಿಕ್ಕಲ್ ಅವರು ಸಹಯಾನ ಸಾಹಿತ್ಯೋತ್ಸವದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವುದು ಸಂತೋಷದ ಸಂಗತಿ.
ಡಾ. ಆರ್.ವಿ.ಭಂಡಾರಿಯವರ ನೆನಪಿನಲ್ಲಿ ಒಂದು ಸಾಂಸ್ಕøತಿಕ ಕೇಂದ್ರ ಕಟ್ಟುವ ಜವಾಬ್ದಾರಿಯ ಭಾಗವಾಗಿ ಅವರದೇ ಮನೆಯಂಗಳದಲ್ಲಿ ನಡೆಯುವ ಈ ಉತ್ಸವದಲ್ಲಿ ತಾವು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿ ‘ಸಹಯಾನ’ದ ಅಧ್ಯಕ್ಷರಾದ ಶಾಂತಾರಾಮ ನಾಯಕ ಹಿಚ್ಕಡ, ಕಾರ್ಯಾಧ್ಯಕ್ಷರಾದ ವಿಷ್ಣು ನಾಯ್ಕ, ಕಾರ್ಯದರ್ಶಿ ವಿಠ್ಠಲ ಭಂಡಾರಿ, ಕೆರೆಕೋಣ, ಖಜಾಂಚಿ ಮಾಸ್ತಿ ಗೌಡ ಅವರು ವಿನಂತಿಸಿದ್ದಾರೆ.
No comments:
Post a Comment