ನಮಸ್ತೆ, ಸಹಯಾನ ಸಾಹಿತ್ಯೋತ್ಸವಕ್ಕೆ ಬನ್ನಿ. ಡಾ. ಆರ್. ವಿ. ಭಂಡಾರಿ ನೆನಪಿನಲ್ಲಿ ಪ್ರತಿವರ್ಷದಂತೆ ಈ ವರ್ಷ ಕೂಡ ಸಹಯಾನ ಸಾಹಿತ್ಯೋತ್ಸವ ಒಂದು ಮುಖ್ಯ ತಾತ್ವಿಕತೆಯ ಸುತ್ತ ಚರ್ಚೆಯನ್ನು ವಿಸ್ತರಿಸುತ್ತಿದೆ. ನಾಡು ನುಡಿಯನ್ನು ಪುನರ್ ನಿರೂಪಿಸಬೇಕಾದ ಕಾಲದ ಒತ್ತಡದ ಕುರಿತು ಚರ್ಚಿಸುತ್ತಿದೆ. ವರ್ತಮಾನವನ್ನು ಹೊಸತಲೆಮಾರಿನ ಸೃಜನ ಶೀಲ ಬರಹದ ಮೂಲಕ ಪ್ರವೇಶಿಸುವ, ನೋಡುವ ಪ್ರಯತ್ನ ಇದು.
ಇದರಲ್ಲಿ ತಮ್ಮ ಉಪಸ್ಥಿತಿ ತೀರಾ ಅವಶ್ಯ. ತಮ್ಮ ಬರುವನ್ನು ನಾವೆಲ್ಲಾ ಹಾರೈಸುತ್ತೇವೆ. ನೀವು ಬಂದರೆ ಮಾತ್ರವೇ ಸಹಯಾನ ಸಾಹಿತ್ಯೋತ್ಸವ ಯಶಸ್ವಿಯಾಗಲು ಸಾಧ್ಯ. ಹೊನ್ನಾವರ ದಿಂದ ಕೇವಲ ಹತ್ತು ಕಿ.ಮಿ ದೂರದಲ್ಲಿ ಅರೆಅಂಗಡಿ ಸಮೀಪ ಕೆರೆಕೋಣ ಎನ್ನುವ ಊರು ಇದೆ. ಸಹಯಾನದ ಸಂಪರ್ಕಕ್ಕೆ ದೂರವಾಣಿ: 08387262159. ನೀವು ಮುದ್ದಾಂ ಬರಬೇಕು.
ವಿಠ್ಠಲ ಭಂಡಾರಿ, ಕೆರೆಕೋಣ ಸಹಯಾನದ ಪರವಾಗಿ,




ಆಶಯ:
ಕಳೆದ 8 ವರ್ಷಗಳ ಹಿಂದೆ ನಮ್ಮನ್ನಗಲಿದ ಡಾ. ಆರ್.ವಿ.ಭಂಡಾರಿಯವರ ನೆನಪಿನಲ್ಲಿ ಪ್ರಾರಂಭವಾಗಿರುವ ‘ಸಹಯಾನ’ ಟ್ರಸ್ಟ್ ಒಂದು ನೋಂದಾಯಿತ ಸಂಸ್ಥೆಯಾಗಿದೆ. ಇದರ ಅಡಿಯಲ್ಲಿ ಪ್ರತಿವರ್ಷ ಮೇ ತಿಂಗಳು ಹೊನ್ನಾವರದಲ್ಲಿ ನಿರ್ಧಿಷ್ಟ ವಿಷಯದ ಮೇಲೆ ‘ಸಹಯಾನ ಸಾಹಿತ್ಯೋತ್ಸವ’ವನ್ನು ನಡೆಸುತ್ತಿದ್ದೇವೆ. ಈವರೆಗೆ 8 ಸಾಹಿತ್ಯೋತ್ಸವಗಳು ನಡೆದಿವೆ. ಈಗ ಹಮ್ಮಿಕೊಂಡಿರುವುದು 8 ನೇ ಸಾಹಿತ್ಯೋತ್ಸವ.
‘ಸಾಹಿತ್ಯ: ಹೊಸ ತಲೆಮಾರು’, ‘ಮಹಿಳೆ: ಹೊಸ ತಲೆಮಾರು’, ‘ಮಾಧ್ಯಮ: ಹೊಸ ತಲೆಮಾರು’, ‘ಚಳುವಳಿ: ಹೊಸ ತಲೆಮಾರು’, ‘ಓದುವ ಸಂಸ್ಕøತಿ: ಹೊಸ ತಲೆಮಾರು’, ‘ಜಾನಪದ: ಹೊಸ ತಲೆಮಾರು’, ‘ಡಾ. ಅಂಬೇಡ್ಕರ್ ಚಿಂತನೆಗಳು: ಹೊಸ ತಲೆಮಾರು’ ಎನ್ನುವ ಕುರಿತು ಉತ್ಸವಗಳು ನಡೆದಿವೆ. ಈ ಉತ್ಸವದಲ್ಲಿ ನಾಡಿನ ನೂರಾರು ಪ್ರಮುಖ ಚಿಂತಕರು ಭಾಗವಹಿಸಿರುತ್ತಾರೆ. ಇದು ಈ ಜಿಲ್ಲೆಯಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಪ್ರಮುಖ ಸಾಹಿತ್ಯ ಕಾರ್ಯಕ್ರಮವಾಗಿದೆ.
ಈ ವರ್ಷ ಕೂಡ ದಿನಾಂಕ 13 ಮೇ 2017 ರಂದು ಹೊನ್ನಾವರ ತಾಲೂಕಿನ ಕೆರೆಕೋಣದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನೆರವಿನೊಂದಿಗೆ “ನಾಡು ನುಡಿಯ ಪುನರ್ ವ್ಯಾಖ್ಯಾನ: ಹೊಸ ತಲೆಮಾರು” ಕುರಿತ ರಾಜ್ಯಮಟ್ಟದ ಸಾಹಿತ್ಯೋತ್ಸವ ನಡೆಸುತ್ತಿದ್ದೇವೆ. ಈ ಉತ್ಸವದಲ್ಲಿ ಕನ್ನಡ ನುಡಿ, ನಾಡು ಮತ್ತು ಅಭಿವೃದ್ಧಿಯ ಕುರಿತ ಗಂಭೀರ ಚರ್ಚೆ ನಡೆಯಲಿದೆ. ್ಲ ವಿಚಾರ ಸಂಕಿರಣ, ಸಂವಾದ, ಕವಿಗೋಷ್ಠಿ, ಜಾನಪದ ಕಲಾಪ್ರದರ್ಶನ, ನಾಟಕ, ಚಿತ್ರಕಲಾ ಪ್ರದರ್ಶನ, ಪುಸ್ತಕ ಬಿಡುಗಡೆ… ಇತ್ಯಾದಿಗಳನ್ನು ಏರ್ಪಡಿಸುತ್ತಿದ್ದೇವೆ. ಇದರಲ್ಲಿ ನಾಡಿನ ವಿವಿಧ ಜಿಲ್ಲೆಗಳಿಂದ ಸುಮಾರು 150-200 ಸಾಹಿತಿ-ಬರಹಗಾರ-ಕಲಾವಿದರು,ಚಿಂತಕರು ಭಾಗವಹಿಸುತ್ತಾರೆ.
2001ರಲ್ಲಿ ಡಾ. ಶಿವರಾಮ ಪಡಿಕ್ಕಲ್ ಅವರು ತಮ್ಮ ‘ನಾಡು-ನುಡಿಯ ರೂಪಕ......[‘ ಸಂಶೋಧನಾ ಪ್ರಬಂಧದಲ್ಲಿ ಕನ್ನಡ ಕಾದಂಬರಿ ಉಗಮ ಹಾಗೂ ಆರಂಭಿಕ ಹಂತದ ಬೆಳವಣಿಗೆಯ ಸಮಾಜ ಶಾಸ್ತ್ರೀಯ ವಿವರಣೆಯೊಂದನ್ನು ನೀಡಿದ್ದರು. ಸಾಹಿತ್ಯ ಕೃತಿಯನ್ನು ಸ್ವಯಂ ಪೂರ್ಣವು ಇತಿಹಾಸಾತೀತವಾದುದು ಆದ ಒಂದು ಶಾಬ್ದಿಕ ರಚನೆಯೆಂದು ನೋಡುವ ನವ್ಯ ವಿಮರ್ಶೆಯ ತಾತ್ವಿಕ ಗ್ರಹಿಕೆಗಳಿಂದ ಬಿಡಿಸಿಕೊಂಡು ಕಾದಂಬರಿಯನ್ನು ಒಂದು .ಸಾಂಸ್ಕøತಿಕ ರೂಪಕ ಎಂದು ಪರಿಗಣಿಸಿ ಚರ್ಚಿಸಿದ್ದರಿಂದ ಕನ್ನಡದ ಮೊದಲ ಕಾದಂಬರಿಗಳು ನಾಡುನುಡಿಯ ರೂಪಕವಾಗಿ ಅವರಿಗೆ ಕಂಡಿತು.
‘ಎಲ್ಲಾ ಸಾಂಸ್ಕøತಿಕ ರೂಪಗಳು ಒಂದು ಕಾಲದ ನಿರ್ದಿಷ್ಟ ಸಂಸ್ಕøತಿಯ ಸನ್ನಿವೇಶದಲ್ಲಿ ಉತ್ಪಾದಿತವಾಗುತ್ತದೆ ಮತ್ತು ಅವು ಮರಳಿ ತಮ್ಮ ಕಾಲದ ಸಂಸ್ಕøತಿಯನ್ನು ಕಟ್ಟುತ್ತದೆ’ ಎಂಬ ನಂಬಿಕೆಯಿಂದ ಹೊರಡುವ ಅವರು ಕಾದಂಬರಿಯನ್ನು ರಚಿಸಿದ ವಿದ್ಯಾವಂತ ವರ್ಗದ ವೈಚಾರಿಕ ವಿನ್ಯಾಸಕ್ಕೂ, ಆ ಮನಃಸ್ಥಿತಿಯನ್ನು ಗ್ರಹಿಸಿದ ಸಮಾಜದ ರಚನೆಗೂ, ಅದೇ ಮನಃಸ್ಥಿತಿಯಿಂದ ಹುಟ್ಟಿದ ಕಾಂದಂಬರಿ ಎಂಬ ಸಾಂಸ್ಕøತಿಕ ರೂಪಕ್ಕೂ ಸಂಬಂಧವಿದೆ ಎಂಬುದು ಅವರ ಮುಖ್ಯ ವಾದ. ಇದೇ ರೀತಿ ಓದುಗ ವರ್ಗವೂ ಸಹಿತ ಲೇಖಕ ವರ್ಗದೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದನ್ನೂ ಅವರು ಗುರುತಿಸಿದರು. ಇದು ನೂರು ವರ್ಷಗಳ ಹಿಂದಿನ ಕಾದಂಬರಿಗಳ ಕತೆ.
ಈಗ ನೂರು ವರ್ಷಗಳ ಈಚೆ ಕನ್ನಡ ಸಂಸ್ಕøತಿಯು ಹಲವು ಪಲ್ಲಟಗಳನ್ನು ಕಂಡಿದೆ. ಕನ್ನಡ ಸಾಹಿತ್ಯ ಲೇಖಕ ಹಾಗೂ ಓದುಗ ವರ್ಗಗಳೆರಡೂ ವಿಸ್ತಾರವಾಗಿದೆ. ಹೀಗಾಗಿ ಕಾದಂಬರಿ ಮಾತ್ರವಲ್ಲ, ಎಲ್ಲ ಸಾಹಿತ್ಯ ರೂಪಗಳೂ ಸಹಿತ ಸಾಂಸ್ಕøತಿಕ ರಚನೆಗಳಾದ ಎಂದು ಪರಿಭಾವಿಸಿ ಇಂದಿನ ಸಾಹಿತ್ಯ ಕಲ್ಪಿಸುವ ನಾಡು-ನುಡಿಯ ಸ್ವರೂಪ ಎಂತಹದು? ಈ ಕಲ್ಪನೆಯ ಹಿಂದಿನ ತಾತ್ವಿಕ ಗ್ರಹಿಕೆಗಳೂ, ಒತ್ತಾಸೆಗಳೂ ಯಾವುವು? ಈ ಕಲ್ಪನೆಯನ್ನು ಸಾಧ್ಯವಾಗಿಸಿದ ಸಾಂಸ್ಕøತಿಕ ಸನ್ನಿವೇಶ ಯಾವೆಲ್ಲ ಪ್ರಶ್ನೆಗಳನ್ನು ಮುಂದಿಡುತ್ತಿದೆ? ಸಾಹಿತ್ಯ ಈ ಪ್ರಶ್ನೆಗಳನ್ನು ಹೇಗೆ ನಿಭಾಯಿಸುತ್ತದೆ? ವಿಸ್ತಾರವಾದ ಓದುವ ವರ್ಗದ ಪಾತ್ರವೇನು? – ಇವೇ ಮೊದಲಾದ ಪ್ರಶ್ನೆಗಳನ್ನು ಚರ್ಚಿಸಲು ಇದು ಸಕಾಲವಾಗಿದೆ.
ಈ ಹಿನ್ನೆಲೆಯಲ್ಲಿ ಈ ಸಲದ ಸಹಯಾನ ಸಾಹಿತ್ಯೋತ್ಸವದಲ್ಲಿ ನಮ್ಮ ಕಾಲದ ಸಾಹಿತ್ಯ ರಾಷ್ಟ್ರ, ಭಾಷೆ ಹಾಗೂ ಸಾಂಸ್ಕøತಿಕ ವೈವಿಧ್ಯದ ಪ್ರಶ್ನೆಗಳನ್ನು ಹೇಗೆ ನಿರ್ವಹಿಸುತ್ತದೆ ಎಂಬುದನ್ನೇ ಮುಖ್ಯ ಪ್ರಶ್ನೆಯಾಗಿ ಚರ್ಚಿಸಬೇಕೆಂದಿದ್ದೀವೆ. ಮತ್ತು ಈ ಚೌಕಟ್ಟು ಇದರಾಚೆಯೂ ವಿಸ್ತರಿಸಿಕೊಳ್ಳಬಹುದು ಮತ್ತು ಇನ್ನಷ್ಟು ಸೂಕ್ಷ್ಮಗೊಳ್ಳಬಹುದಾಗಿದೆ.
ಈ ಹಿನ್ನೆಲೆಯಲ್ಲಿ ನಡೆಸಲಾಗುತ್ತಿರುವ ಸಾಹಿತ್ಯೋತ್ಸವಕ್ಕೆ ತಾವು ಆಗಮಿಸ ಬೇಕಾಗಿ ವಿನಂತಿ.
No comments:
Post a Comment