Thursday, 11 May 2017

ಸಮುದಾಯ ಬಿಇಎಂಎಲ್ ನಗರ, ಕೆಜಿಎಫ್-ಬೇಸಿಗೆ ರಂಗ ತರಬೇತಿ ಶಿಬಿರದ ಉದ್ಘಾಟನೆ



    ಸಮುದಾಯ ಬಿಇಎಂಎಲ್ ನಗರ, ಕೆಜಿಎಫ್ ತನ್ನ 35ನೇ ವರ್ಷಾಚರಣೆಯ ಅಂಗವಾಗಿ ದಿನಾಂಕ 10.05.2017 ರ ಬುಧವಾರದಂದು ಬೆಮೆಲ್ ಬಯುಲುರಂಗ ಮಂದಿರದಲ್ಲಿ ಬೇಸಿಗೆ ರಂಗತರಬೇತಿ ಶಿಬಿರದ ಉದ್ಘಾಟನಾ ಕಾರ್ಯಕ್ರಮ ನೆರವೇರಿತು.
    ಈ ಶಿಬಿರದ ಉದ್ಘಾಟನೆಯನ್ನು ಸಮುದಾಯದ ಉಪಾಧ್ಯಕ್ಷರಾದ ಡಾ||ವಿನೋದ್‍ಕುಮಾರ್ ರವರು ನೆರವೇರಿಸಿದರು, ಅವರು ಮಾತನಾಡುತಾ ಇಂದಿನ ಮಕ್ಕಳು ಭವಿಷ್ಯದ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಲು ರಂಗಭೂಮಿ ಕೊಡುಗೆ ಸಾಕಷ್ಟಿದೆ, ಪ್ರತಿಯೊಬ್ಬರಲ್ಲೂ ಕೂಡ ಒಂದೊಂದು ಪ್ರತಿಭೆಗಳು ಇರುತ್ತದೆ ಅದನ್ನು ಹೊರತರಲು ಈ ಶಿಬಿರ ಪರಿಣಾಮಕಾರಿಯಾದ ಪಾತ್ರವನ್ನು ನಿರ್ವಹಿಸುತ್ತದೆ.  ಸಮಾಜದಲ್ಲಿ ಒಬ್ಬ ಜವಾಬ್ದಾರಿ ಹಾಗೂ ಎಲ್ಲ ಮತ-ಪಂಥಗಳನ್ನು ಮೀರಿ ಮಾನವೀಯತೆಯನ್ನು ಹೇಗೆ ಬೆಳಸಿಕೊಳ್ಳಲು ಮತ್ತು ನಾವು ಹೇಗೆ ಮಾತನಾಡಬೇಕು, ಎಂಬುದನ್ನು ಹಲವಾರು ರಂಗಪಾಠಗಳ ಮೂಲಕ ಇಲ್ಲಿ ತಿಳಿಸಲಾಗುತ್ತದೆ.  ಇಂದು ಅನೇಕ ಶಿಬಿರಗಳು ಲಾಭ ಮಾಡುವುದೇ ಒಂದು ಉದ್ದೇಶವಾಗಿಟ್ಟುಕೊಂಡು ಮಾಡುತ್ತಿದ್ದಾರೆ, ಆದ್ದರಿಂದ ಪೋಷಕರಲ್ಲಿ ನನ್ನ ವಿನಂತಿಯೇನೆಂದರೆ ಇಲ್ಲಿ ನಡೆಯುವ ಶಿಬಿರದ ಪೂರ್ಣಪ್ರಯೋಜನವನ್ನು ತಮ್ಮ ಮಕ್ಕಳು ಪಡೆಯಲು ಅವರಿಗೆ ಎಲ್ಲಾ ರೀತಿಯ ಸಹಕಾರವನ್ನು ತಾವುಗಳು ನೀಡಬೇಕು ಎಂದು ವಿನಂತಿಸಿದರು.
    ಈ ಶಿಬಿರಕ್ಕೆ ಶುಭ ಕೋರಿ ಬೆಮೆಲ್ ಕಾರ್ಮಿಕ ಕಲ್ಯಾಣ ನಿಧಿಯ ಕಾರ್ಯದರ್ಶಿಯಾದ ಶ್ರೀ ಮಲ್ಲಯ್ಯ ನಂದಿಕೋಲ್‍ಮಠ್ ರವರು ಮಾತನಾಡುತ್ತಾ ನಾನು ಹಲವು ದಶಕಗಳಿಂದ ಸಮುದಾಯದ ಚಟುವಟಿಕೆಗಳನ್ನು ಗಮನಿಸುತ್ತಾ ಬಂದಿದ್ದೇನೆ.  ಅವರು ಮಾಡುವ ಬೀದಿ-ರಂಗನಾಟಕಗಳು ಸಮಾಜಕ್ಕೆ ಒಳ್ಳೆ  ಸಂದೇ±ಗಳನ್ನು ನೀಡುವಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡಿದೆ.  ಈ ಶಿಬಿರದ ಸದುಪಯೋಗವನ್ನು ತಾವೆಲ್ಲರೂ ಪಡೆದುಕೊಳ್ಳಿ ಮತ್ತು ಈ ಶಿಬಿರಕ್ಕೆ ಎಲ್ಲಾ ರೀತಿಯ ಸಹಕಾರವನ್ನು ನೀಡುತ್ತೇವೆ ಎಂದು ತಿಳಿಸಿದರು.
    ಶಿಬಿರದ ನಿರ್ದೇಶಕರಾದ ಶ್ರೀ ಅಚ್ಯುತರವರು ಮಾತನಾಡುತ್ತಾ ಈ ಶಿಬಿರದ ಮೂಲಕ ರಂಗಭೂಮಿಯ ಪರಿಚಯವನ್ನು ಇಂದಿನ ತಲೆಮಾರಿನ ಮಕ್ಕಳಿಗೆ ನಾವು ತಿಳಿಸುವುದು.  ಮಕ್ಕಳು ಇಂದು ಅತಿ ಧಾವಂತದ ಬದುಕನ್ನು ನಡೆಸುತ್ತಿದ್ದಾರೆ, ಅವರಲ್ಲಿ ಹುದುಗಿರುವ ಅನೇಕ ಪ್ರತಿಭೆಗಳು ಮರೆಯಾಗುತ್ತಾ ಇದ್ದಾವೆ.  ಪ್ರತಿಯೊಬ್ಬರಿಗೂ ಅವರದೇ ಆದ ಸಾಮಥ್ರ್ಯ ಇದ್ದೇ ಇರುತ್ತದೆ, ಆದರೆ ಅದನ್ನು ಹೊರತೆತೆಯುವ ಕೆಲಸವನ್ನು ರಂಗಭೂಮಿಯಲ್ಲಿ ಮಾತ್ರ ಯಶಸ್ವಿಯಾಗಿ ಮಾಡಬಹುದಾಗಿದೆ.  ಎಲ್ಲರೂ ಇಂದು ನಮ್ಮ ಮಕ್ಕಳೂ ಬರೀ ಡಾಕ್ಟರ್-ಎಂಜೀನೀಯರ್ ಆಗಲಿ ಎಂದು ಹಂಬಲಿಸುತ್ತಿದ್ದಾರೆ ಹೊರತು ಸಂವೇದನಾಶೀಲತೆಯನ್ನು ಹೊಂದಿದ ಪ್ರಜ್ಞಾವಂತ ನಾಗರೀಕರಾಗಲಿ ಎಂದು ಆಶಿಸುವ ಜನ ಕಡಿಮೆಯಾಗುತ್ತಿದ್ದಾರೆ.
    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಶ್ರೀ ಜಗದೀಶ್ ನಾಯಕ್ ರವರು ವಹಿಸಿಕೊಂಡು ಮಾತನಾಡುತ್ತಾ ಸಮುದಾಯ ಹಮ್ಮಿಕೊಳ್ಳುವ ಎಲ್ಲಾ ಕಾರ್ಯಕ್ರಮಗಳಿಗೆ ತಾವುಗಳೆಲ್ಲರೂ ನಿರಂತರವಾಗಿ ಸಹಕಾರ ನೀಡುತ್ತಾ ಬಂದಿದ್ದೀರಿ, ಈ ಶಿಬಿರ ಯಶಸ್ವಿಯಾಗಲು ತುಂಬು ಹೃದಯದ ಸಹಕಾರವನ್ನು ನೀಡಬೇಕು ಎಂದರು.   ಕಾರ್ಯಕ್ರಮವನ್ನು ಶ್ರೀಮತಿ ಫ್ಲೋರಾ ರವರು ಸ್ವಾಗತ, ವಂದನಾರ್ಪಣೆ ಶ್ರೀ ಸುರೇಶ್ ಬಾಬು, ಹಾಗೂ ಕಾರ್ಯಕ್ರಮಕ್ಕೆ ಆಶಯಗೀತೆ ಹಾಡಿ ನಿರೂಪಣೆಯನ್ನು ಶ್ರೀ ಜನಾರ್ಧನ ಮಾಡಿದರು.




No comments:

Post a Comment