Monday 26 December 2016
ಕಾವ್ಯರಂಗ
ಕನ್ನಡ ಕಾವ್ಯಪ್ರಯೋಗ
ನುಡಿಯೊಳಗೆ ಸಲುವುದು ನಾಡಿನಾ ರೂಪಕ. ನಾಡಿನ ಆದರ್ಶ, ಕಾಣ್ಕೆ, ಸಾಂಸ್ಕøತಿಕ ಚರಿತ್ರೆ ನುಡಿಯೊಳಗೆ ಒಡಮೂಡಿದೆ. ಶಾಸನಪದ್ಯಗಳಿಂದ ಹಿಡಿದು ಇದುವರೆಗಿನ ಕಾವ್ಯ ಕಥನಗಳ ಆಯ್ದ ಬರಹಗಳ ತುಣುಕನ್ನು ಸಂಬಂಧಗಳ ಪರಿಕಲ್ಪನೆಯಾಧಾರದಲ್ಲಿ ಹೆಣೆದು ಇಲ್ಲಿ ರಂಗರೂಪಕವಾಗಿಸಲಾಗಿದೆ. ಕನ್ನಡದ ಲೋಕಗೃಹಿಕೆ, ಕನ್ನಡದ ವಿವೇಕ ಇವನ್ನು ಇಂದಿನ ಯುವಕರಿಗಾಗಿ ಮರುನಿರೂಪಿಸುವ ಒಂದು ಪ್ರಯತ್ನ ಇದು. ಸಮುದಾಯದ ನಟ ನಟಿಯರು ಈ ಕಾವ್ಯಗಳನ್ನು ಆಡುತ್ತಾರೆ, ಹಾಡುತ್ತಾರೆ, ಕೆಲವನ್ನು ಅಭಿನಯಿಸುತ್ತಾರೆ. ಒಂದೂವರೆ ಗಂಟೆ ಕಾಲ ಸುಮಾರು 31 ಸಾಹಿತ್ಯಿಕ ಬರಹವನ್ನು ಇಲ್ಲಿ ರಂಗಕ್ಕೆ ತರಲಾಗಿದೆ. ಸಾಹಿತ್ಯ ಕಥನಗಳ ರಂಗ ಓದು ಇದು. ವಿದ್ಯಾರ್ಥಿಗಳಿಗೂ, ಅದ್ಯಾಪಕರಿಗೂ ಅನುಕೂಲವಾಗುವುದೆಂಬ ಶೈಕ್ಷಣಿಕ ಉದ್ದೇಶವೂ, ಯುವಕರ ದನಿ ಇಂದು ಕರ್ಕಶವಾಗುತ್ತಿರುವ ಹೊತ್ತಿನಲ್ಲಿ ಅವರ ದೇಹಕ್ಕೆ ಕಾವ್ಯದ ಸಾಹಚರ್ಯ ಒದಗಿಸುವ ಸಾಮಾಜಿಕ ಉದ್ದೇಶವೂ ಸಮುದಾಯದ ಈ ರಂಗ ಪ್ರಸ್ತುತಿಯ ಹಿಂದಿದೆ.
ರಂಗ ಪಠ್ಯ: ಡಾ.ಎಂ.ಜಿ.ಹೆಗಡೆ; ವಿನ್ಯಾಸ:ದಾಮೋದರ ನಾಯ್ಕ, ಹೊನ್ನಾವರ; ನಿರ್ದೇಶನ: ಡಾ.ಶ್ರೀಪಾದ ಭಟ್; ಸಹನಿರ್ದೆಶನ: ಯತೀಶ್ ಕೊಳ್ಳೇಗಾಲ ಮತ್ತು ಲಕ್ಷ್ಮಣ ಪಿ;
ವಿಡಿಯೋಗಾಗಿ ಕ್ಲಿಕ್ ಮಾಡಿ
ಕಾವ್ಯರಂಗ
Wednesday 21 December 2016
ಸಮುದಾಯ ಆರನೇ ರಾಜ್ಯ ಸಮ್ಮೇಳನ ಮೈಸೂರು
.
13ಮತ್ತು 14ನೇ ನವಂಬರ್ 2016 ರಂದು ಮೈಸೂರಿನಲ್ಲಿ ನಡೆದ 6ನೇ ರಾಜ್ಯ ಸಮ್ಮೇಳನ
ಹುಲಿ ಮತ್ತು ಆನೆ ಪರಸ್ಪರ ಸ್ನೇಹ ಬಯಸಿದಂತೆ 70ರ ದಶಕದಲ್ಲಿ ಒಂದಾಗಿದ್ದ ದಲಿತರು ಮತ್ತು ಬಂಡಾಯಗಾರರು ತಮ್ಮ ಒಗ್ಗಟ್ಟಿನ ಮಂತ್ರದಿಂದ ಸರ್ಕಾರವನ್ನೇ ನಡುಗಿಸಿದರು. ಆದರೆ ನಂತರದ ಕಾಲಘಟ್ಟ ತದ್ವಿರುದ್ದವಾಗಿದ್ದು ವಿಪರ್ಯಾಸ. ಒನ್ ವೇ ಟ್ರಾಪಿಕ್ನಂತೆ ಮನ್ಕೀ ಬಾತ್ ತೋರುತ್ತದೆ. ಒನ್ ವೇ ಟಾಕ್ಗಿಂತ ಮುಖಾಮುಖಿ ಸಂವಾದ ಅಗತ್ಯ. ಇತ್ತೀಚಿನ ದಿನಗಳಲ್ಲಿ ಮಾಧ್ಯಮದ ಪರಿಕಲ್ಪನೆ ಬಿದ್ದು ಹೋಗಿದ್ದು ಬದಲಿಗೆ ಮಾಧ್ಯಮ ಪೌರೋಹಿತ್ಯ ಬೆಳಕಿಗೆ ಬರುತ್ತಿದೆ, ಅದರಲ್ಲೂ ವಿದ್ಯುನ್ಮಾನದ ಕೆಲವು ವಾಹಿನಿಗಳು ಪೌರೋಹಿತ್ಯವನ್ನು ಅಧಿಕೃತವಾಗಿ ಅಸ್ತ್ರವನ್ನಾಗಿಸಿಕೊಂಡಿವೆ. ಅದರಲ್ಲಿ ಒಂದು ಶತಮಾನದ ಇತಿಹಾಸ ಕಂಡಿರುವ ಮುದ್ರಣ ಮಾಧ್ಯಮ ನೈತಿಕ, ಸಾಮಾಜಿಕ ಪರಿಕಲ್ಪನೆಗೆ ಸ್ಪಂದಿಸುವ ಗುಣಲP್ಪ್ಷಣಗಳನ್ನು ತಕ್ಕಮಟ್ಟಿಗಾದರೂ ಪಾಲಿಸಿಕೊಂಡು ಬರುತ್ತಿದೆ. ಆದರೆ ಮಾಧ್ಯಮಗಳು ಹೊಟ್ಟೆಪಾಡಿಗಾಗಿ ಭಿಕ್ಷೆ ಬೇಡುವ ಕೆಲಸ ರೂಡಿಸಿಕೊಂಡಿದ್ದು ಟಿಆರ್ಪಿಗಾಗಿ ಅನೈತಿಕತೆಯಿಂದ ನಡೆದುಕೊಳ್ಳುತ್ತಿವೆ ಎಂದು ತಮ್ಮ ಉದ್ಘಾಟನಾ ಭಾಷಣದಲ್ಲಿ ಪ್ರೊ.ಅರವಿಂದ ಮಾಲಗತ್ತಿಯವರು ಮಾತನಾಡಿದರು. ಅತಿಥಿಗಳಾಗಿ ಭಾಗವಹಿಸಿದ್ದ ರಂಗಾಯಣದ ಮಾಜಿ ನಿರ್ದೇಶಕರಾದ ಹೆಚ್.ಜನಾರ್ಧನ(ಜನ್ನಿ) ಮಾತನಾಡುತ್ತ ಸಮುದಾಯ ನನಗೆ ತಾಯಿ. ನನ್ನ ಬೆಳವಣಿಗೆಗೆ ಸಮುದಾಯ ಕಾರಣ ಎಂದು ಸಮುದಾಯದ ಹಾಡುಗಳನ್ನು ಹಾಡುವ ಮುಖಾಂತರ ಸಮುದಾಯದ ಪ್ರಸ್ತುತತೆ ಕುರಿತು ವಿವರಿಸಿದರು. ಸಭೆಯ ಅಧ್ಯಕ್ಷತೆಯನ್ನು ಪ್ರೋ.ಆರ್.ಕೆ.ಹುಡಗಿ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಟಿ.ಸುರೇಂದ್ರರಾವ್À ಹಾಗೂ ಸ್ವಾಗತ ಸಮಿತಿ ಅಧ್ಯಕ್ಷರಾದ ಎಸ್.ಆರ್.ರಮೇಶ, ಪ್ರಧಾನ ಕಾರ್ಯದರ್ಶಿ ಜಗನ್ನಾಥ ಉಪಸ್ಥಿತರಿದ್ದರು, ಕಾರ್ಯಕ್ರಮವನ್ನು ಎಸ್.ದೇವೇಂದ್ರಗೌಡ ನಡೆಸಿಕೊಟ್ಟರು.
ವಿಚಾರ ಸಂಕಿರಣ
“ಸಾಂಸ್ಕøತಿಕ ಪ್ರತಿರೋಧದ ಮಾದರಿಗಳು”
ಸಮ್ಮೇಳನದಲ್ಲಿ ವಿಚಾರ ಸಂಕಿರಣ ಸಡೆಸಲಾಯಿತು ರಂಗಭೂಮಿಯಲ್ಲಿ ಪ್ರತಿರೋಧದ ಮಾದರಿಗಳು ಕುರಿತು ಪ್ರೊ.ಎಚ್.ಎಸ್.ಉಮೇಶ ಮಾತನಾಡುತ್ತಾ ಬ್ರೆಕ್ಟನಿಂದ ಪ್ರಭಾವಿತರಾಗಿ ಅರಂಭಿಸಿ ಬಿನ್ನ ದಾರಿಗಳನ್ನು ಹಿಡಿದ ಹಾಗೂ ಹಿಡಿಯುತ್ತಿರುವ ಮೂರು ನಾಟಕಕಾರರನ್ನು (ಎಚ್.ಎಮ್.ಚೆನ್ನಯ್ಯ,ಲಿಂಗದೇವರ ಹಳೆಮನೆ.ಪ್ರಸನ್ನ)ಪ್ರಾತಿನಿಧಿಕವಾಗಿ ತೆಗೆದುಕೊಂಡು ವಿಶ್ಲೇಷಿಸಿದರು. ಪ್ರೊ.ಶೈಲಜಾ ಅವರು ಸಂಗೀತದಲ್ಲಿ ಪ್ರತಿರೋಧಗಳ ಕುರಿತು ಮಾತನಾಡುತ್ತಾ ಕ್ಲಾಸಿಕಲ್ ಪರಂಪರೆಯ ಒಳಗೆ ಮತ್ತು ಹೊರಗಿನ ಪ್ರತಿರೋಧದ ಮಾದರಿಗಳನ್ನು ಉದಾಹರಣೆ ಸಹಿತ(ಕರ್ನಾಟಕ ಕ್ಲಾಸಿಕಲ್ ಸಂಗೀತದ ನಿಷೇದ-ಕಟ್ಟುಪಾಡುಗಳನ್ನು ಒಡೆದ ವಚನ, ಭಕ್ತಿಪಂಥ, ತತ್ವಪದ, ಪ್ರಾದೇಶಿಕ ಜಾನಪದ ಹಾಡುಗಳು)ವಿವರಿಸಿದರು. ಪ್ರೊ.ರಾಜಪ್ಪ ದಳವಾಯಿಯವರು ಸಿನಿಮಾದಲ್ಲಿ ಹೊಸ ಅಲೆಯ ಬಗ್ಗೆ ಮಾತನಾಡುತ್ತಾ ತಿಥಿ ಮುಂತಾದ ಹೊಸ ಅಲೆಯ ಸಿನಿಮಾಗಳು ಬೀರಿದ ಪರಿಣಾಮ ಮಾಧ್ಯಮದಲ್ಲೂ ಹೊಸ ಪ್ರತಿರೋಧದ ಮಾದರಿಗಳು ಹುಟ್ಟಿಕೊಳ್ಳುವಂತಹ ಅಸಕ್ತಿಕಾರಕ ವಿದ್ಯಾಮಾನಗಳ ಬಗ್ಗೆ ಮಾತನಾಡಿದರು. ಅಧ್ಯಕ್ಷತೆಯನ್ನು ಪ್ರೊ.ಆರ್ .ಕೆ.ಹುಡಗಿ ವಹಿಸಿದ್ದರು ಶ್ರೀಪಾಧ ಭಟ್ ಸಂಕಿರಣ ನಡೆಸಿಕೊಟ್ಟರು.
ಸಮ್ಮೇಳನದ ಕಾರ್ಯಕಲಾಪಗಳು
ಸಮ್ಮೇಳನದ ಪ್ರತಿನಿಧಿ ಅಧಿವೇಶನವನ್ನು ನಡೆಸಿಕೊಡಲು ಪ್ರೊ.ಹುಡಗಿ, ಅಚ್ಯುತ, ಶ್ರೀಮತಿ ಪ್ಲೋರಾ ಇರುವ ಅಧ್ಯಕ್ಷೀಯ ಮಂಡಳಿಯನ್ನು ರಚಿಸಲಾಯಿತು. ಕಲಾಪ ದಾಖಲು, ನಿರ್ಣಯ ಮತ್ತು ಅರ್ಹತಾ ಪರಿಶೀಲನಾ ಸಮಿತಿಗಳನ್ನೂ ನೇಮಿಸಲಾಯಿತು. ಎಸ್.ದೇವೇಂದ್ರಗೌಡ ಅವರು ಮಂಡಿಸಿದ ಶ್ರದ್ಧಾಂಜಲಿ ನಿರ್ಣಯವನ್ನು ಸಮ್ಮೇಳನ ಅಂಗೀಕರಿಸಿತು. ಪ್ರಧಾನ ಕಾರ್ಯದರ್ಶಿ ಟಿ. ಸುರೇಂದ್ರ ರಾವ್ ಹಾಗೂ ವಿಠ್ಠಲ ಭಂಡಾರಿ ಸಮ್ಮೇಳನದ ಪ್ರಮುಖ ಅಜೆಂಡಾ ಆದ ರಾಜ್ಯ ಸಮಿತಿಯ ಕರಡು ವರದಿಯನ್ನು ಚರ್ಚೆಗೆ ಮಂಡಿಸಿದರು.
ಮೊದಲ ಭಾಗ ಇಂದಿನ ಸಾಂಸ್ಕøತಿಕ ಪರಿಸ್ಥಿತಿಯ ವಿವರವಾದ ನೋಟ ಕೊಡುವಂಥದಾಗಿತ್ತು. ಈ ಹಿನ್ನೆಲೆಯಲ್ಲಿ ಮುಂಬರುವ ಅವಧಿಯಲ್ಲಿ ಸಮುದಾಯದ ಕರ್ತವ್ಯಗಳನ್ನೂ ಗುರುತಿಸಲಾಗಿತ್ತು. ಎರಡನೆಯ ಭಾಗ ಸಂಘಟನಾ ಪರಿಸ್ಥಿತಿಯ ಪರಾಮರ್ಶೆ ಸಹ ಇತ್ತು. ಮೂರನೆಯ ಭಾಗದಲ್ಲಿ ಈಗಾಗಲೇ ಸಮುದಾಯದ ಘಟಕಗಳ ವಿಸ್ತರಣೆ, ಪ್ರಧಾನವಾಗಿ ಮಾಡುತ್ತಾ ಬಂದಿರುವ ರಂಗ ಚಟುವಟಿಕೆಗಳು, ವಿಚಾರ ಸಂಕಿರಣ, ಸಾಂಸ್ಕøತಿಕ ವಿದ್ಯಮಾನಗಳಿಗೆ ಸ್ಪಂದನ, ಸಾಂಸ್ಕøತಿಕ ಮಧ್ಯಪ್ರವೇಶ ಮುಂತಾದವುಗಳಲ್ಲಿ ವಿಸ್ತರಣೆ ಮತ್ತು ನಿರ್ದಿಷ್ಟ ಯೋಜನೆಯೂ ಇತ್ತು. ಹಾಗೂ ರಾಜ್ಯ ಸಮಿತಿ ಸಭೆ. ಸಭೆಯಲ್ಲಿ ಸದಸ್ಯರ ಹಾಜರಾತಿ ವಿವರ ನೀಡಲಾಗಿತ್ತು. ಆ ಮೇಲೆ ಲೆಕ್ಕಪತ್ರ ವರದಿಯನ್ನು ಖಜಾಂಚಿ ವಸಂತ್ರಾಜ್ ಎನ್.ಕೆ. ಮಂಡಿಸಿದರು. ಮೊದಲ ದಿನ ಸಂಜೆ ಪ್ರತಿನಿಧಿಗಳ ಗುಂಪು ರಚಿಸಿ, ಸಭೆ ಸೇರಿ ಚರ್ಚಿಸಲು ಸೂಚಿಸಲಾಯಿತು.
ವರದಿಯ ಮೇಲೆ ಚರ್ಚೆ
ಎರಡನೇ ದಿನ ಕರಡು ವರದಿಯ ಮೇಲೆ ಚರ್ಚೆ ಮುಖ್ಯ ಕಲಾಪವಾಗಿತ್ತು. 25ಕ್ಕೂ ಹೆಚ್ಚು ಪ್ರತಿನಿಧಿಗಳು ಕರಡು ವರದಿಯ ಬಗ್ಗೆ ತಮ್ಮ ಅಭಿಪ್ರಾಯ ಮಂಡಿಸಿದರು. ವರದಿ ಪುಷ್ಟೀಕರಿಸಲು ಸಲಹೆಗಳು, ವರದಿಯ ಬಗ್ಗೆ ವಿಮರ್ಶೆ-ಟೀಕೆ, ಬಿಟ್ಟು ಹೋಗಿರುವ ವಿಷಯಗಳನ್ನು ಸೇರಿಸಲು ಸೂಚನೆಗಳು, ಚರ್ಚೆ ನಡೆಯಿತು. ಈ ಚರ್ಚೆಗೆ ಉತ್ತರ ನೀಡಿದ ಪ್ರಧಾನ ಕಾರ್ಯದರ್ಶಿ ಕೆಲವು ವಿಷಯಗಳ ಬಗ್ಗೆ ಸ್ಪಷ್ಟಿಕರಣ ನೀಡಿದರು. ಕೆಲವು ಸಲಹೆ-ಸೂಚನೆಗಳನ್ನು ಅಂಗೀಕರಿಸಿದರು. ಈ ಮಾರ್ಪಾಡುಗಳೊಂದಿಗೆ ಸಮ್ಮೇಳನ ಕರಡು ವರದಿಯನ್ನು ಸರ್ವಾನುಮತದಿಂದ ಅಂಗೀಕರಿಸಿತು. ಲೆಕ್ಕಪತ್ರದ ವರದಿಯನ್ನು ಸಮ್ಮೇಳನ ಸರ್ವಾನುಮತದಿಂದ ಅಂಗೀಕರಿಸಿತು. ಕರಡು ವರದಿ ಬಗ್ಗೆ ಚರ್ಚೆ ನಡೆಸುತ್ತಿದ್ದಂತೆ ಹಲವು ನಿರ್ಣಯಗಳು ಸಮ್ಮೇಳನದಲ್ಲಿ ಸೂಚಿತವಾದವು. 6 ನಿರ್ಣಯಗಳನ್ನು ಸಮ್ಮೇಳನ ಸರ್ವಾನುಮತದಿಂದ ಅಂಗೀಕರಿಸಿತು. (6 ನಿರ್ಣಯಗಳಾವುವು ಎಂದು ಪ್ರತಿಯೊಂದನ್ನೂ ಒಂದು ವಾಕ್ಯದಲ್ಲಿ ಸೂಚಿಸಬೇಕು)
ನೂತನವಾಗಿ ಆಯ್ಕೆಯಾದ ಸಮುದಾಯ ರಾಜ್ಯ ಸಮಿತಿಯ ವಿವರ
ಕ್ರಮ ಸಂಖ್ಯೆ ಹುದ್ದೆ ಹೆಸರು ಸ್ಥಳ
1. ಅಧ್ಯಕ್ಷರು ಅಚ್ಯುತ ಕೆ.ಜಿ.ಎಫ್
2. ಉಪಾಧ್ಯಕ್ಷರು ಟಿ.ಸುರೇಂದ್ರ ರಾವ್ ಬೆಂಗಳೂರು
3. " ವಾಸುದೇವ ಉಚ್ಚಿಲ್ ಮಂಗಳೂರು
4. " ಬಿ.ಐ.ಈಳಗೇರ ಧಾರವಾಡ
5. ಪ್ರಧಾನ ಕಾರ್ಯದರ್ಶಿ ಎಸ್.ದೇವೇಂದ್ರ ಗೌಡ ಸಿಂಧನೂರು
6. ಸಂಘಟನಾ ಕಾರ್ಯದರ್ಶಿ ಡಾ.ವಿಠ್ಠಲ ಭಂಡಾರಿ ಉ.ಕನ್ನಡ
7. ಸಹ ಕಾರ್ಯದರ್ಶಿ ವಿಮಲ ಕೆ.ಎಸ್ ಬೆಂಗಳೂರು
8. " ಉದಯ ಗಾಂವ್ಕರ್ ಕುಂದಾಪುರ
9. ಖಜಾಂಚಿ ಎನ್.ಕೆ.ವಸಂತರಾಜ್ ಬೆಂಗಳೂರು
10. ರಾಜ್ಯ ಸಮಿತಿ ಸದಸ್ಯರು ಜನಾರ್ಧನ ಕೆ.ಜಿ.ಎಫ್
11. " ಜಗದೀಶ ನಾಯಕ "
12. “ ಶ್ರೀಮತಿ ಫ್ಲೋರಾಅಚ್ಚುತ್ “
13. " ಎಂ.ಜಿ.ವೆಂಕಟೇಶ್ ಬೆಂಗಳೂರು
14. " ವೆಂಕಟೇಶ್ ಪ್ರಸಾದ್ ವಿ. "
15. " ಎಂ.ಮಹೇಶ "
16. " ಪ್ರಕಾಶ ಕಾವರಾಡಿ ತುಮಕೂರು
17. " ಮನೋಜ ವಾಮಂಜೂರು ಮಂಗಳೂರು
18. " ಸದಾನಂದ ಬೈಂದೂರ ಕುಂದಾಪುರ
19. " ಕೆ.ಪ್ರಭಾಕರನ್ ಶಿವಮೊಗ್ಗ
20. " ಡಾ.ಶ್ರೀಪಾದ ಭಟ್ ಶಿರಸಿ(ಉತ್ತರ ಕನ್ನಡ)
21. " ರಾಜಶೇಖರ ಡಿ. ಷಲವಡೆ ರಾಮದುರ್ಗ
22. " ರಂಜಿತಾ ಜಾಧವ್ ಧಾರವಾಡ
23. " ವಿಲಾಸ್ ಶೇರಖಾನ್ "
24. " ಕರುಣಾನಿಧಿ ಹೊಸಪೇಟೆ
25. " ಸಂದೀಪ .ಕೆ ಗುಲ್ಬರ್ಗಾ
26. “ ಮೋಹನಲಾಲ್ ಜೈನ್ ಕುಷ್ಟಗಿ
27. ‘’ ಬಸವರಾಜ ಕಮ್ಮಾರ ಹೆಚ್.ಬಿ.ಹಳ್ಳಿ
28. ‘’ ಮಂಜುನಾಥ ಕೆ.ವಿ. ಕೋಲಾರ
29. ‘’ ಅಮಿತ್ ಮಾಲೂರು
ಸಮಾರೋಪ ಸಮಾರಂಭ
ಕ್ರಾಂತಿಕಾರಕ ಚಳುವಳಿ ಅಗತ್ಯವಿದೆ
ಜಾನಪದ ತಜÐ ಪ್ರೋ.ಹಿ.ಶಿ.ರಾಮಚಂದ್ರೇಗೌಡ ಅಭಿಮತ
ಸಮಾರೋಪದಲ್ಲಿ ಮಾತನಾಡುತ್ತಾ ಜನರ ಹಿತಾಶಕ್ತಿಗಳನ್ನು ಧಾರ್ಮಿಕ ಕಟ್ಟು ಪಾಡುಗಳು ಮೂಲಕ ಬಲಿಕೊಡುವ ಪ್ರಯತ್ನವು ಸಾವಿರಾರು ವರ್ಷಗಳಿಂದ ನಡೆದುಕೊಂಡು ಬರುತ್ತಲೇ ಇದೆ. ಜನಸಾಮಾನ್ಯರಿಗೆ ತಮಗೆ ಶೋಷಣೆ ಆಗುತ್ತಿದೆ ಎಂಬ ಅರಿವು ಸಹಾ ಇರುವುದಿಲ್ಲಾ ಇಂತಹ ಸಂದರ್ಭದಲ್ಲಿ ಕಾಲಕಾಲಕ್ಕೆ ಜನರನ್ನು ಶೋಷಣೆಯಿಂದ ತಪ್ಪಿಸುವ ಪ್ರಯತ್ನಗಳು ನಡೆದಿವೆ. ಅನೇಕ ಕ್ರಾಂತಿಕಾರಕ ಚಳುವಳಿಗಳು ರೂಪಗೊಂಡಿವೆ. ಈಗಿನ ಕಾಲಘಟ್ಟದಲ್ಲಿ ಇಂತಹ ಚಳುವಳಿಗಳ ಅಗತ್ಯ ಇದೆ ಮತ್ತೆ ಸಂಘಟಿತರಾಗಿ ಜನಪರ ಕಾರ್ಯಕ್ರಮ ರೂಪಿಸಬೇಕು. ಜನಪದ ಮಹಾಕಾವ್ಯಗಳಲ್ಲಿ ಕ್ರಾಂತಿಯ ಲಕ್ಷಣಗಳಿವೆ, ಶ್ರಮಿಕರ ಕೈಯಲ್ಲಿ ಆಯುಧಗಳನ್ನು ನೀಡಿ ಕ್ರಾಂತಿಗೀತೆಗಳನ್ನು ಹಾಡಿದ ಮಹಾನುಭಾವರು, ಜನಜೀವನಕ್ಕೆ ಬೇಕಾದ ಸಾಮಗ್ರಿಗಳೇ ಬದುಕಲೂ ಪೂರಕವಾಗಿವೆ. ನಾವು ಸ್ವಾಭಿಮಾನದ ಬದುಕಿಗಾಗಿ ತುಡಿಯುವ ಕೆಲಸವನ್ನು ಮಾಡಬೇಕೆಂದರು.
ಅತಿಥಿಗಳಾಗಿ ಪಿ.ಗಂಗಾಧರಸ್ವಾಮಿ ತಮ್ಮ ಸಮುದಾಯದ ಅನುಭವವನ್ನು ಹಂಚಿಕೊಂಡರು, ಸಭೆಯ ಅಧ್ಯಕ್ಷತೆಯನ್ನು ಪ್ರೊ.ಆರ್.ಕೆ.ಹುಡಗಿ ವಹಿಸಿದ್ದರು. ನೂತನ ಅಧ್ಯಕ್ಷರಾದ ಅಚ್ಚುತ್ ಪ್ರಧಾನ ಕಾರ್ಯದರ್ಶಿಎಸ್.ದೇವೇಂದ್ರಗೌಡ ಉಪಸ್ಥಿತರಿದ್ದರು, ಕಾರ್ಯಕ್ರಮವನ್ನು ಸಂಘಟನಾ ಕಾರ್ಯದರ್ಶಿ ವಿಠ್ಠಲ್ ಭಂಡಾರಿ ನಡೆಸಿಕೊಟ್ಟರು. ಸಮ್ಮೇಳನಕ್ಕೆ ನೆರವಾದ ಸ್ವಯಂ ಸೇವಕರಿಗೆ ನೆನಪಿನ ಪುಸ್ತಕ ಕಾಣಿಕೆ ಅರ್ಪಿಸಲಾಯಿತು. ಸಮುದಾಯ ಗೀತೆ ‘ಎಲ್ಲಿಂದ ಬಂದಿರೆಂದು ಕೇಳಬಹುದು ನೀವು.. ..’ ಹಾಡುವುದರೊಂದಿಗೆ ಸಮ್ಮೇಳನ ಮುಕ್ತಾಯವಾಯಿತು.
ಸಮುದಾಯ ಆರನೇ ರಾಜ್ಯ ಸಮ್ಮೇಳನ ಅಂಗೀಕರಿಸಿದ ನಿರ್ಣಯಗಳು
1. ಮೌಡ್ಯಾಚರಣೆ ಪ್ರತಿಬಂಧಕ ಕಾಯ್ದೆ ಜಾರಿಗಾಗಿ ಒತ್ತಾಯ;
2. ಡಾ.ಎಂ.ಎಂ.ಕಲಬುರ್ಗಿಯವರನ್ನು ಅಮಾನುಷವಾಗಿ ಹತ್ಯೆ ಮಾಡಿದ ಹಂತಕರನ್ನು ಬಂಧಿಸಲು ಅಗ್ರಹ
3. 18 ವರ್ಷದವರೆಗಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಒದಗಿಸಲು, ಹಾಗೂ ಶಿಕ್ಷಣದ ರಾಷ್ಟ್ರೀಕರಣಕ್ಕೆ ಒತ್ತಾಯ;
4. ಅಹಾರ, ಉಡುಪುಗಳ ನೆಪದಲ್ಲಿ ದಲಿತರ, ಅಲ್ಪಸಂಖ್ಯಾತರ ಮತ್ತು ಮಹಿಳೆಯರ ಸಹಜ ಜೀವನ ವಿಧಾನದ ಮೇಲಿನ ಹಲ್ಲೆಗೆ ಖಂಡನೆ;
5. ಮಾಧ್ಯಮ ಪುರೋಹಿತಶಾಹಿ ಪ್ರವ್ಲತ್ತಿಯನ್ನು ಖಂಡಿಸಿ, ಮಾಧ್ಯಮದ ಸ್ವಾತಂತ್ರವನ್ನು ಎತ್ತಿಹಿಡಿಯಲು ಹಾಗೂ ಬದಲಿ ಮಾಧ್ಯಮವನ್ನು ರೂಪಿಸುವ ಪರವಾಗಿ;
6. ಭಾರತ ಮತ್ತು ಕರ್ನಾಟಕದ ಬಹುತ್ವವನ್ನು ಉಳಿಸಿ, ಬೆಳೆಸುತ್ತೇವೆ ಎಂದು ಪಣ ತೊಡುತ್ತಾ ಈ ಕಾರ್ಯದಲ್ಲಿ ತೊಡಗಿರುವ ಸಾಂಸ್ಕøತಿಕ, ಸಾಮಾಜಿಕ ಚಳುವಳಿಗೆ ಬೆಂಬಲಿಸಲು ಕರೆ
ಶುಭಕೋರಿ ಮಾತನಾಡಿದವರು:
ಮಹಂತೇಶ- ಸಿಐಟಿಯು
ಮುನೀರ್ ಕಾಟಿಪಾಳ್ಯ-ಡಿವೈಎಫ್ಐ
ಲೀಲಾವತಿ-ಜನವಾದಿ ಮಹಿಳಾ ಸಂಘಟನೆ
ಆರ್.ವಿ.ಆಚಾರಿ-ಇಎಂಎಸ್ ಸ್ಟಡಿ ಸರ್ಕಲ್
ಸುನಂದ-ಅಂಗನವಾಡಿ ಕಾರ್ಯಕರ್ತರ ಸಂಘಟನೆ
ಸಾಂಸ್ಕøತಿಕ ಕಾರ್ಯಕ್ರಮ
ಮೈಸೂರಿನ ಗುರುರಾಜ ಅವರ ತಂಡದಿಂದ ಬುಡಕಟ್ಟು ಮಹಾಕಾವ್ಯದ ಹಾಡುಗಾರಿಕೆ.
ಎಸ್..ದೇವೇಂದ್ರಗೌಡ
ಪ್ರಧಾನ ಕಾರ್ಯದರ್ಶಿ
13ಮತ್ತು 14ನೇ ನವಂಬರ್ 2016 ರಂದು ಮೈಸೂರಿನಲ್ಲಿ ನಡೆದ 6ನೇ ರಾಜ್ಯ ಸಮ್ಮೇಳನ
ಉದ್ಘಾಟನಾ ಕಾರ್ಯಕ್ರಮಸರ್ಕಾರವನ್ನೇ ನಡುಗಿಸಿದ ದಲಿತರು, ಬಂಡಾಯಗಾರರು- 70ರ ದಶಕವನ್ನು ಸ್ಮರಿಸಿದ ಪ್ರೊ.ಅರವಿಂದ ಮಾಲಗತ್ತಿ.
ಹುಲಿ ಮತ್ತು ಆನೆ ಪರಸ್ಪರ ಸ್ನೇಹ ಬಯಸಿದಂತೆ 70ರ ದಶಕದಲ್ಲಿ ಒಂದಾಗಿದ್ದ ದಲಿತರು ಮತ್ತು ಬಂಡಾಯಗಾರರು ತಮ್ಮ ಒಗ್ಗಟ್ಟಿನ ಮಂತ್ರದಿಂದ ಸರ್ಕಾರವನ್ನೇ ನಡುಗಿಸಿದರು. ಆದರೆ ನಂತರದ ಕಾಲಘಟ್ಟ ತದ್ವಿರುದ್ದವಾಗಿದ್ದು ವಿಪರ್ಯಾಸ. ಒನ್ ವೇ ಟ್ರಾಪಿಕ್ನಂತೆ ಮನ್ಕೀ ಬಾತ್ ತೋರುತ್ತದೆ. ಒನ್ ವೇ ಟಾಕ್ಗಿಂತ ಮುಖಾಮುಖಿ ಸಂವಾದ ಅಗತ್ಯ. ಇತ್ತೀಚಿನ ದಿನಗಳಲ್ಲಿ ಮಾಧ್ಯಮದ ಪರಿಕಲ್ಪನೆ ಬಿದ್ದು ಹೋಗಿದ್ದು ಬದಲಿಗೆ ಮಾಧ್ಯಮ ಪೌರೋಹಿತ್ಯ ಬೆಳಕಿಗೆ ಬರುತ್ತಿದೆ, ಅದರಲ್ಲೂ ವಿದ್ಯುನ್ಮಾನದ ಕೆಲವು ವಾಹಿನಿಗಳು ಪೌರೋಹಿತ್ಯವನ್ನು ಅಧಿಕೃತವಾಗಿ ಅಸ್ತ್ರವನ್ನಾಗಿಸಿಕೊಂಡಿವೆ. ಅದರಲ್ಲಿ ಒಂದು ಶತಮಾನದ ಇತಿಹಾಸ ಕಂಡಿರುವ ಮುದ್ರಣ ಮಾಧ್ಯಮ ನೈತಿಕ, ಸಾಮಾಜಿಕ ಪರಿಕಲ್ಪನೆಗೆ ಸ್ಪಂದಿಸುವ ಗುಣಲP್ಪ್ಷಣಗಳನ್ನು ತಕ್ಕಮಟ್ಟಿಗಾದರೂ ಪಾಲಿಸಿಕೊಂಡು ಬರುತ್ತಿದೆ. ಆದರೆ ಮಾಧ್ಯಮಗಳು ಹೊಟ್ಟೆಪಾಡಿಗಾಗಿ ಭಿಕ್ಷೆ ಬೇಡುವ ಕೆಲಸ ರೂಡಿಸಿಕೊಂಡಿದ್ದು ಟಿಆರ್ಪಿಗಾಗಿ ಅನೈತಿಕತೆಯಿಂದ ನಡೆದುಕೊಳ್ಳುತ್ತಿವೆ ಎಂದು ತಮ್ಮ ಉದ್ಘಾಟನಾ ಭಾಷಣದಲ್ಲಿ ಪ್ರೊ.ಅರವಿಂದ ಮಾಲಗತ್ತಿಯವರು ಮಾತನಾಡಿದರು. ಅತಿಥಿಗಳಾಗಿ ಭಾಗವಹಿಸಿದ್ದ ರಂಗಾಯಣದ ಮಾಜಿ ನಿರ್ದೇಶಕರಾದ ಹೆಚ್.ಜನಾರ್ಧನ(ಜನ್ನಿ) ಮಾತನಾಡುತ್ತ ಸಮುದಾಯ ನನಗೆ ತಾಯಿ. ನನ್ನ ಬೆಳವಣಿಗೆಗೆ ಸಮುದಾಯ ಕಾರಣ ಎಂದು ಸಮುದಾಯದ ಹಾಡುಗಳನ್ನು ಹಾಡುವ ಮುಖಾಂತರ ಸಮುದಾಯದ ಪ್ರಸ್ತುತತೆ ಕುರಿತು ವಿವರಿಸಿದರು. ಸಭೆಯ ಅಧ್ಯಕ್ಷತೆಯನ್ನು ಪ್ರೋ.ಆರ್.ಕೆ.ಹುಡಗಿ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಟಿ.ಸುರೇಂದ್ರರಾವ್À ಹಾಗೂ ಸ್ವಾಗತ ಸಮಿತಿ ಅಧ್ಯಕ್ಷರಾದ ಎಸ್.ಆರ್.ರಮೇಶ, ಪ್ರಧಾನ ಕಾರ್ಯದರ್ಶಿ ಜಗನ್ನಾಥ ಉಪಸ್ಥಿತರಿದ್ದರು, ಕಾರ್ಯಕ್ರಮವನ್ನು ಎಸ್.ದೇವೇಂದ್ರಗೌಡ ನಡೆಸಿಕೊಟ್ಟರು.
ವಿಚಾರ ಸಂಕಿರಣ
“ಸಾಂಸ್ಕøತಿಕ ಪ್ರತಿರೋಧದ ಮಾದರಿಗಳು”
ಸಮ್ಮೇಳನದಲ್ಲಿ ವಿಚಾರ ಸಂಕಿರಣ ಸಡೆಸಲಾಯಿತು ರಂಗಭೂಮಿಯಲ್ಲಿ ಪ್ರತಿರೋಧದ ಮಾದರಿಗಳು ಕುರಿತು ಪ್ರೊ.ಎಚ್.ಎಸ್.ಉಮೇಶ ಮಾತನಾಡುತ್ತಾ ಬ್ರೆಕ್ಟನಿಂದ ಪ್ರಭಾವಿತರಾಗಿ ಅರಂಭಿಸಿ ಬಿನ್ನ ದಾರಿಗಳನ್ನು ಹಿಡಿದ ಹಾಗೂ ಹಿಡಿಯುತ್ತಿರುವ ಮೂರು ನಾಟಕಕಾರರನ್ನು (ಎಚ್.ಎಮ್.ಚೆನ್ನಯ್ಯ,ಲಿಂಗದೇವರ ಹಳೆಮನೆ.ಪ್ರಸನ್ನ)ಪ್ರಾತಿನಿಧಿಕವಾಗಿ ತೆಗೆದುಕೊಂಡು ವಿಶ್ಲೇಷಿಸಿದರು. ಪ್ರೊ.ಶೈಲಜಾ ಅವರು ಸಂಗೀತದಲ್ಲಿ ಪ್ರತಿರೋಧಗಳ ಕುರಿತು ಮಾತನಾಡುತ್ತಾ ಕ್ಲಾಸಿಕಲ್ ಪರಂಪರೆಯ ಒಳಗೆ ಮತ್ತು ಹೊರಗಿನ ಪ್ರತಿರೋಧದ ಮಾದರಿಗಳನ್ನು ಉದಾಹರಣೆ ಸಹಿತ(ಕರ್ನಾಟಕ ಕ್ಲಾಸಿಕಲ್ ಸಂಗೀತದ ನಿಷೇದ-ಕಟ್ಟುಪಾಡುಗಳನ್ನು ಒಡೆದ ವಚನ, ಭಕ್ತಿಪಂಥ, ತತ್ವಪದ, ಪ್ರಾದೇಶಿಕ ಜಾನಪದ ಹಾಡುಗಳು)ವಿವರಿಸಿದರು. ಪ್ರೊ.ರಾಜಪ್ಪ ದಳವಾಯಿಯವರು ಸಿನಿಮಾದಲ್ಲಿ ಹೊಸ ಅಲೆಯ ಬಗ್ಗೆ ಮಾತನಾಡುತ್ತಾ ತಿಥಿ ಮುಂತಾದ ಹೊಸ ಅಲೆಯ ಸಿನಿಮಾಗಳು ಬೀರಿದ ಪರಿಣಾಮ ಮಾಧ್ಯಮದಲ್ಲೂ ಹೊಸ ಪ್ರತಿರೋಧದ ಮಾದರಿಗಳು ಹುಟ್ಟಿಕೊಳ್ಳುವಂತಹ ಅಸಕ್ತಿಕಾರಕ ವಿದ್ಯಾಮಾನಗಳ ಬಗ್ಗೆ ಮಾತನಾಡಿದರು. ಅಧ್ಯಕ್ಷತೆಯನ್ನು ಪ್ರೊ.ಆರ್ .ಕೆ.ಹುಡಗಿ ವಹಿಸಿದ್ದರು ಶ್ರೀಪಾಧ ಭಟ್ ಸಂಕಿರಣ ನಡೆಸಿಕೊಟ್ಟರು.
ಸಮ್ಮೇಳನದ ಕಾರ್ಯಕಲಾಪಗಳು
ಸಮ್ಮೇಳನದ ಪ್ರತಿನಿಧಿ ಅಧಿವೇಶನವನ್ನು ನಡೆಸಿಕೊಡಲು ಪ್ರೊ.ಹುಡಗಿ, ಅಚ್ಯುತ, ಶ್ರೀಮತಿ ಪ್ಲೋರಾ ಇರುವ ಅಧ್ಯಕ್ಷೀಯ ಮಂಡಳಿಯನ್ನು ರಚಿಸಲಾಯಿತು. ಕಲಾಪ ದಾಖಲು, ನಿರ್ಣಯ ಮತ್ತು ಅರ್ಹತಾ ಪರಿಶೀಲನಾ ಸಮಿತಿಗಳನ್ನೂ ನೇಮಿಸಲಾಯಿತು. ಎಸ್.ದೇವೇಂದ್ರಗೌಡ ಅವರು ಮಂಡಿಸಿದ ಶ್ರದ್ಧಾಂಜಲಿ ನಿರ್ಣಯವನ್ನು ಸಮ್ಮೇಳನ ಅಂಗೀಕರಿಸಿತು. ಪ್ರಧಾನ ಕಾರ್ಯದರ್ಶಿ ಟಿ. ಸುರೇಂದ್ರ ರಾವ್ ಹಾಗೂ ವಿಠ್ಠಲ ಭಂಡಾರಿ ಸಮ್ಮೇಳನದ ಪ್ರಮುಖ ಅಜೆಂಡಾ ಆದ ರಾಜ್ಯ ಸಮಿತಿಯ ಕರಡು ವರದಿಯನ್ನು ಚರ್ಚೆಗೆ ಮಂಡಿಸಿದರು.
ಮೊದಲ ಭಾಗ ಇಂದಿನ ಸಾಂಸ್ಕøತಿಕ ಪರಿಸ್ಥಿತಿಯ ವಿವರವಾದ ನೋಟ ಕೊಡುವಂಥದಾಗಿತ್ತು. ಈ ಹಿನ್ನೆಲೆಯಲ್ಲಿ ಮುಂಬರುವ ಅವಧಿಯಲ್ಲಿ ಸಮುದಾಯದ ಕರ್ತವ್ಯಗಳನ್ನೂ ಗುರುತಿಸಲಾಗಿತ್ತು. ಎರಡನೆಯ ಭಾಗ ಸಂಘಟನಾ ಪರಿಸ್ಥಿತಿಯ ಪರಾಮರ್ಶೆ ಸಹ ಇತ್ತು. ಮೂರನೆಯ ಭಾಗದಲ್ಲಿ ಈಗಾಗಲೇ ಸಮುದಾಯದ ಘಟಕಗಳ ವಿಸ್ತರಣೆ, ಪ್ರಧಾನವಾಗಿ ಮಾಡುತ್ತಾ ಬಂದಿರುವ ರಂಗ ಚಟುವಟಿಕೆಗಳು, ವಿಚಾರ ಸಂಕಿರಣ, ಸಾಂಸ್ಕøತಿಕ ವಿದ್ಯಮಾನಗಳಿಗೆ ಸ್ಪಂದನ, ಸಾಂಸ್ಕøತಿಕ ಮಧ್ಯಪ್ರವೇಶ ಮುಂತಾದವುಗಳಲ್ಲಿ ವಿಸ್ತರಣೆ ಮತ್ತು ನಿರ್ದಿಷ್ಟ ಯೋಜನೆಯೂ ಇತ್ತು. ಹಾಗೂ ರಾಜ್ಯ ಸಮಿತಿ ಸಭೆ. ಸಭೆಯಲ್ಲಿ ಸದಸ್ಯರ ಹಾಜರಾತಿ ವಿವರ ನೀಡಲಾಗಿತ್ತು. ಆ ಮೇಲೆ ಲೆಕ್ಕಪತ್ರ ವರದಿಯನ್ನು ಖಜಾಂಚಿ ವಸಂತ್ರಾಜ್ ಎನ್.ಕೆ. ಮಂಡಿಸಿದರು. ಮೊದಲ ದಿನ ಸಂಜೆ ಪ್ರತಿನಿಧಿಗಳ ಗುಂಪು ರಚಿಸಿ, ಸಭೆ ಸೇರಿ ಚರ್ಚಿಸಲು ಸೂಚಿಸಲಾಯಿತು.
ವರದಿಯ ಮೇಲೆ ಚರ್ಚೆ
ಎರಡನೇ ದಿನ ಕರಡು ವರದಿಯ ಮೇಲೆ ಚರ್ಚೆ ಮುಖ್ಯ ಕಲಾಪವಾಗಿತ್ತು. 25ಕ್ಕೂ ಹೆಚ್ಚು ಪ್ರತಿನಿಧಿಗಳು ಕರಡು ವರದಿಯ ಬಗ್ಗೆ ತಮ್ಮ ಅಭಿಪ್ರಾಯ ಮಂಡಿಸಿದರು. ವರದಿ ಪುಷ್ಟೀಕರಿಸಲು ಸಲಹೆಗಳು, ವರದಿಯ ಬಗ್ಗೆ ವಿಮರ್ಶೆ-ಟೀಕೆ, ಬಿಟ್ಟು ಹೋಗಿರುವ ವಿಷಯಗಳನ್ನು ಸೇರಿಸಲು ಸೂಚನೆಗಳು, ಚರ್ಚೆ ನಡೆಯಿತು. ಈ ಚರ್ಚೆಗೆ ಉತ್ತರ ನೀಡಿದ ಪ್ರಧಾನ ಕಾರ್ಯದರ್ಶಿ ಕೆಲವು ವಿಷಯಗಳ ಬಗ್ಗೆ ಸ್ಪಷ್ಟಿಕರಣ ನೀಡಿದರು. ಕೆಲವು ಸಲಹೆ-ಸೂಚನೆಗಳನ್ನು ಅಂಗೀಕರಿಸಿದರು. ಈ ಮಾರ್ಪಾಡುಗಳೊಂದಿಗೆ ಸಮ್ಮೇಳನ ಕರಡು ವರದಿಯನ್ನು ಸರ್ವಾನುಮತದಿಂದ ಅಂಗೀಕರಿಸಿತು. ಲೆಕ್ಕಪತ್ರದ ವರದಿಯನ್ನು ಸಮ್ಮೇಳನ ಸರ್ವಾನುಮತದಿಂದ ಅಂಗೀಕರಿಸಿತು. ಕರಡು ವರದಿ ಬಗ್ಗೆ ಚರ್ಚೆ ನಡೆಸುತ್ತಿದ್ದಂತೆ ಹಲವು ನಿರ್ಣಯಗಳು ಸಮ್ಮೇಳನದಲ್ಲಿ ಸೂಚಿತವಾದವು. 6 ನಿರ್ಣಯಗಳನ್ನು ಸಮ್ಮೇಳನ ಸರ್ವಾನುಮತದಿಂದ ಅಂಗೀಕರಿಸಿತು. (6 ನಿರ್ಣಯಗಳಾವುವು ಎಂದು ಪ್ರತಿಯೊಂದನ್ನೂ ಒಂದು ವಾಕ್ಯದಲ್ಲಿ ಸೂಚಿಸಬೇಕು)
ನೂತನವಾಗಿ ಆಯ್ಕೆಯಾದ ಸಮುದಾಯ ರಾಜ್ಯ ಸಮಿತಿಯ ವಿವರ
ಕ್ರಮ ಸಂಖ್ಯೆ ಹುದ್ದೆ ಹೆಸರು ಸ್ಥಳ
1. ಅಧ್ಯಕ್ಷರು ಅಚ್ಯುತ ಕೆ.ಜಿ.ಎಫ್
2. ಉಪಾಧ್ಯಕ್ಷರು ಟಿ.ಸುರೇಂದ್ರ ರಾವ್ ಬೆಂಗಳೂರು
3. " ವಾಸುದೇವ ಉಚ್ಚಿಲ್ ಮಂಗಳೂರು
4. " ಬಿ.ಐ.ಈಳಗೇರ ಧಾರವಾಡ
5. ಪ್ರಧಾನ ಕಾರ್ಯದರ್ಶಿ ಎಸ್.ದೇವೇಂದ್ರ ಗೌಡ ಸಿಂಧನೂರು
6. ಸಂಘಟನಾ ಕಾರ್ಯದರ್ಶಿ ಡಾ.ವಿಠ್ಠಲ ಭಂಡಾರಿ ಉ.ಕನ್ನಡ
7. ಸಹ ಕಾರ್ಯದರ್ಶಿ ವಿಮಲ ಕೆ.ಎಸ್ ಬೆಂಗಳೂರು
8. " ಉದಯ ಗಾಂವ್ಕರ್ ಕುಂದಾಪುರ
9. ಖಜಾಂಚಿ ಎನ್.ಕೆ.ವಸಂತರಾಜ್ ಬೆಂಗಳೂರು
10. ರಾಜ್ಯ ಸಮಿತಿ ಸದಸ್ಯರು ಜನಾರ್ಧನ ಕೆ.ಜಿ.ಎಫ್
11. " ಜಗದೀಶ ನಾಯಕ "
12. “ ಶ್ರೀಮತಿ ಫ್ಲೋರಾಅಚ್ಚುತ್ “
13. " ಎಂ.ಜಿ.ವೆಂಕಟೇಶ್ ಬೆಂಗಳೂರು
14. " ವೆಂಕಟೇಶ್ ಪ್ರಸಾದ್ ವಿ. "
15. " ಎಂ.ಮಹೇಶ "
16. " ಪ್ರಕಾಶ ಕಾವರಾಡಿ ತುಮಕೂರು
17. " ಮನೋಜ ವಾಮಂಜೂರು ಮಂಗಳೂರು
18. " ಸದಾನಂದ ಬೈಂದೂರ ಕುಂದಾಪುರ
19. " ಕೆ.ಪ್ರಭಾಕರನ್ ಶಿವಮೊಗ್ಗ
20. " ಡಾ.ಶ್ರೀಪಾದ ಭಟ್ ಶಿರಸಿ(ಉತ್ತರ ಕನ್ನಡ)
21. " ರಾಜಶೇಖರ ಡಿ. ಷಲವಡೆ ರಾಮದುರ್ಗ
22. " ರಂಜಿತಾ ಜಾಧವ್ ಧಾರವಾಡ
23. " ವಿಲಾಸ್ ಶೇರಖಾನ್ "
24. " ಕರುಣಾನಿಧಿ ಹೊಸಪೇಟೆ
25. " ಸಂದೀಪ .ಕೆ ಗುಲ್ಬರ್ಗಾ
26. “ ಮೋಹನಲಾಲ್ ಜೈನ್ ಕುಷ್ಟಗಿ
27. ‘’ ಬಸವರಾಜ ಕಮ್ಮಾರ ಹೆಚ್.ಬಿ.ಹಳ್ಳಿ
28. ‘’ ಮಂಜುನಾಥ ಕೆ.ವಿ. ಕೋಲಾರ
29. ‘’ ಅಮಿತ್ ಮಾಲೂರು
ಸಮಾರೋಪ ಸಮಾರಂಭ
ಕ್ರಾಂತಿಕಾರಕ ಚಳುವಳಿ ಅಗತ್ಯವಿದೆ
ಜಾನಪದ ತಜÐ ಪ್ರೋ.ಹಿ.ಶಿ.ರಾಮಚಂದ್ರೇಗೌಡ ಅಭಿಮತ
ಸಮಾರೋಪದಲ್ಲಿ ಮಾತನಾಡುತ್ತಾ ಜನರ ಹಿತಾಶಕ್ತಿಗಳನ್ನು ಧಾರ್ಮಿಕ ಕಟ್ಟು ಪಾಡುಗಳು ಮೂಲಕ ಬಲಿಕೊಡುವ ಪ್ರಯತ್ನವು ಸಾವಿರಾರು ವರ್ಷಗಳಿಂದ ನಡೆದುಕೊಂಡು ಬರುತ್ತಲೇ ಇದೆ. ಜನಸಾಮಾನ್ಯರಿಗೆ ತಮಗೆ ಶೋಷಣೆ ಆಗುತ್ತಿದೆ ಎಂಬ ಅರಿವು ಸಹಾ ಇರುವುದಿಲ್ಲಾ ಇಂತಹ ಸಂದರ್ಭದಲ್ಲಿ ಕಾಲಕಾಲಕ್ಕೆ ಜನರನ್ನು ಶೋಷಣೆಯಿಂದ ತಪ್ಪಿಸುವ ಪ್ರಯತ್ನಗಳು ನಡೆದಿವೆ. ಅನೇಕ ಕ್ರಾಂತಿಕಾರಕ ಚಳುವಳಿಗಳು ರೂಪಗೊಂಡಿವೆ. ಈಗಿನ ಕಾಲಘಟ್ಟದಲ್ಲಿ ಇಂತಹ ಚಳುವಳಿಗಳ ಅಗತ್ಯ ಇದೆ ಮತ್ತೆ ಸಂಘಟಿತರಾಗಿ ಜನಪರ ಕಾರ್ಯಕ್ರಮ ರೂಪಿಸಬೇಕು. ಜನಪದ ಮಹಾಕಾವ್ಯಗಳಲ್ಲಿ ಕ್ರಾಂತಿಯ ಲಕ್ಷಣಗಳಿವೆ, ಶ್ರಮಿಕರ ಕೈಯಲ್ಲಿ ಆಯುಧಗಳನ್ನು ನೀಡಿ ಕ್ರಾಂತಿಗೀತೆಗಳನ್ನು ಹಾಡಿದ ಮಹಾನುಭಾವರು, ಜನಜೀವನಕ್ಕೆ ಬೇಕಾದ ಸಾಮಗ್ರಿಗಳೇ ಬದುಕಲೂ ಪೂರಕವಾಗಿವೆ. ನಾವು ಸ್ವಾಭಿಮಾನದ ಬದುಕಿಗಾಗಿ ತುಡಿಯುವ ಕೆಲಸವನ್ನು ಮಾಡಬೇಕೆಂದರು.
ಅತಿಥಿಗಳಾಗಿ ಪಿ.ಗಂಗಾಧರಸ್ವಾಮಿ ತಮ್ಮ ಸಮುದಾಯದ ಅನುಭವವನ್ನು ಹಂಚಿಕೊಂಡರು, ಸಭೆಯ ಅಧ್ಯಕ್ಷತೆಯನ್ನು ಪ್ರೊ.ಆರ್.ಕೆ.ಹುಡಗಿ ವಹಿಸಿದ್ದರು. ನೂತನ ಅಧ್ಯಕ್ಷರಾದ ಅಚ್ಚುತ್ ಪ್ರಧಾನ ಕಾರ್ಯದರ್ಶಿಎಸ್.ದೇವೇಂದ್ರಗೌಡ ಉಪಸ್ಥಿತರಿದ್ದರು, ಕಾರ್ಯಕ್ರಮವನ್ನು ಸಂಘಟನಾ ಕಾರ್ಯದರ್ಶಿ ವಿಠ್ಠಲ್ ಭಂಡಾರಿ ನಡೆಸಿಕೊಟ್ಟರು. ಸಮ್ಮೇಳನಕ್ಕೆ ನೆರವಾದ ಸ್ವಯಂ ಸೇವಕರಿಗೆ ನೆನಪಿನ ಪುಸ್ತಕ ಕಾಣಿಕೆ ಅರ್ಪಿಸಲಾಯಿತು. ಸಮುದಾಯ ಗೀತೆ ‘ಎಲ್ಲಿಂದ ಬಂದಿರೆಂದು ಕೇಳಬಹುದು ನೀವು.. ..’ ಹಾಡುವುದರೊಂದಿಗೆ ಸಮ್ಮೇಳನ ಮುಕ್ತಾಯವಾಯಿತು.
ಸಮುದಾಯ ಆರನೇ ರಾಜ್ಯ ಸಮ್ಮೇಳನ ಅಂಗೀಕರಿಸಿದ ನಿರ್ಣಯಗಳು
1. ಮೌಡ್ಯಾಚರಣೆ ಪ್ರತಿಬಂಧಕ ಕಾಯ್ದೆ ಜಾರಿಗಾಗಿ ಒತ್ತಾಯ;
2. ಡಾ.ಎಂ.ಎಂ.ಕಲಬುರ್ಗಿಯವರನ್ನು ಅಮಾನುಷವಾಗಿ ಹತ್ಯೆ ಮಾಡಿದ ಹಂತಕರನ್ನು ಬಂಧಿಸಲು ಅಗ್ರಹ
3. 18 ವರ್ಷದವರೆಗಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಒದಗಿಸಲು, ಹಾಗೂ ಶಿಕ್ಷಣದ ರಾಷ್ಟ್ರೀಕರಣಕ್ಕೆ ಒತ್ತಾಯ;
4. ಅಹಾರ, ಉಡುಪುಗಳ ನೆಪದಲ್ಲಿ ದಲಿತರ, ಅಲ್ಪಸಂಖ್ಯಾತರ ಮತ್ತು ಮಹಿಳೆಯರ ಸಹಜ ಜೀವನ ವಿಧಾನದ ಮೇಲಿನ ಹಲ್ಲೆಗೆ ಖಂಡನೆ;
5. ಮಾಧ್ಯಮ ಪುರೋಹಿತಶಾಹಿ ಪ್ರವ್ಲತ್ತಿಯನ್ನು ಖಂಡಿಸಿ, ಮಾಧ್ಯಮದ ಸ್ವಾತಂತ್ರವನ್ನು ಎತ್ತಿಹಿಡಿಯಲು ಹಾಗೂ ಬದಲಿ ಮಾಧ್ಯಮವನ್ನು ರೂಪಿಸುವ ಪರವಾಗಿ;
6. ಭಾರತ ಮತ್ತು ಕರ್ನಾಟಕದ ಬಹುತ್ವವನ್ನು ಉಳಿಸಿ, ಬೆಳೆಸುತ್ತೇವೆ ಎಂದು ಪಣ ತೊಡುತ್ತಾ ಈ ಕಾರ್ಯದಲ್ಲಿ ತೊಡಗಿರುವ ಸಾಂಸ್ಕøತಿಕ, ಸಾಮಾಜಿಕ ಚಳುವಳಿಗೆ ಬೆಂಬಲಿಸಲು ಕರೆ
ಶುಭಕೋರಿ ಮಾತನಾಡಿದವರು:
ಮಹಂತೇಶ- ಸಿಐಟಿಯು
ಮುನೀರ್ ಕಾಟಿಪಾಳ್ಯ-ಡಿವೈಎಫ್ಐ
ಲೀಲಾವತಿ-ಜನವಾದಿ ಮಹಿಳಾ ಸಂಘಟನೆ
ಆರ್.ವಿ.ಆಚಾರಿ-ಇಎಂಎಸ್ ಸ್ಟಡಿ ಸರ್ಕಲ್
ಸುನಂದ-ಅಂಗನವಾಡಿ ಕಾರ್ಯಕರ್ತರ ಸಂಘಟನೆ
ಸಾಂಸ್ಕøತಿಕ ಕಾರ್ಯಕ್ರಮ
ಮೈಸೂರಿನ ಗುರುರಾಜ ಅವರ ತಂಡದಿಂದ ಬುಡಕಟ್ಟು ಮಹಾಕಾವ್ಯದ ಹಾಡುಗಾರಿಕೆ.
ಎಸ್..ದೇವೇಂದ್ರಗೌಡ
ಪ್ರಧಾನ ಕಾರ್ಯದರ್ಶಿ
Friday 9 December 2016
ಕಸವರವೆಂಬುದೇಂ ನೆರೆ ಸೈರಿಸಲಾರ್ಪಡೆ ಪರಧರ್ಮಂ ಪರವಿಚಾರಮುಮಮ್
ಕೇರಳ ಸಾಹಿತ್ಯ ಅಕಾಡೆಮಿ ದಕ್ಷಿಣ ರಾಜ್ಯಗಳ ಸಾಹಿತಿಗಳ ವಿಚಾರ ಸಂಕಿರಣವೊಂದನ್ನು ಏರ್ಪಡಿಸಿದ್ದರು
ಅದಕ್ಕೆ ನೀಲಾ ಅವರನ್ನು ಆಹ್ವಾನಿಸಲಾಗಿತ್ತು. ಅಲ್ಲಿ ಅವರು ಮಂಡಿಸಿದ ಪ್ರಬಂಧ
Communalism and writing
First and foremost, I would like to thank Kerala Sahitya
Academy for having put together an event to remind the writers of their
responsibility during the times when the writers are faced with a lot more
hostility than ever before. Writers have a duty towards finding the voices of
unrest and help create a space of harmony
and coexistence for all.
When I was a small girl,
my most lovable neighbor Amina Begum would give me Surkhumba (a sweet made of
dry fruits and milk) when it was Ramzan and Chongya (wheat flour based sweet)
when it was Muharram. The stunted compound between our houses was anything but
a barrier. It acted as a bridge to exchange our festive preparations.
Because when it was
Deepavali or Dasara, our traditional sweets and savouries such as Karajikayi,
Laddu, Kodubale etc would travel the same route of that compound -wall – turned
– bridge and enter her house. The sparkle in her eyes, the melodious sounds her
bangles would produce, her hands perpetually stained with mehandi dots, and
most importantly, the manner in which she spoke urdu laced with Hindi, had
turned me into her biggest fan. My mother and Amina Begum would converse for
hours together. My mother would speak in Kannada and Amina would reply in
Urdu-hindi, and vice versa. Both communicated perfectly well with each other.
That they were conversing in many languages was something that never bothered
them.
Now, when I say I don’t
know Malayalam and yet I have gathered courage to speak infront of all of you,
this is where my inspiration comes from. From my mother and Amina Bi who used
many languages to share their lives with each other. That also goes to say when
thoughts are genuine, one can speak to anyone else in any language and it will
strike a chord.
I mentioned of that small
stunted compound wall between my house and Amina Bi’s. When I started writing,
I had demolished this wall in one of my notes of expression. Even now, I often
dream that I am demolishing that wall. That is my most comforting thought. That
of, demolishing the wall and creating spaces where minds can meet without fear.
It makes me immensely happy. Let us hope the day is not far when we can see
this dream turn into reality.
Now, before arriving at
the context of this speech, I would like to remember the noblest soul -- Guru
Narayana. Another person who has to be commemorated is writer Kulakunda
Shivaram, who was known through his pen name ‘Niranjana’. He immortalized the
saga of farmer revolution through his novel ‘Chirasmarane’. Owing to him, we
often remember Kerala as Kayyur.
This year’s Onam
festivities saw the whole country welcome King Bali. I also did the same. My
heart does not accept the idea of welcoming this festival as Vaman Jayanthi. At
this point in time, we have witnessed the silent sorrow of scores of writers.
Killings of Narendra Dhabolkar, Govind Pansare and M M Kalaburagi have left a
lot of us severely impaired. In order to prove that humanity is a value that’s
above all else, writers, scientists and artists along with many others have
returned their awards and protested against the injustice meted out on them.
A faint whisper that
indicates that all movements have died, keeps getting louder often. The
post-modernism that is a result of globalization keeps nourishing individual
glory over mass movements by denying their existence.
But it is not any matter
of fantasy that the award vapasi did shake the powerful corridors of the
government, along with a particular chest that’s symbolically measured in
inches.
To deny this, a march was
taken out in Delhi to state or prove that award vapasi was a sham and that
there was no intolerance in the country. All this hurried response was to hide
the fact that intolerance was growing. Just when the other writers tried
proving that intolerance was a figment of imagination, Akhlaq was murdered over
his choice of food. Elected representatives got down to the level of defending
this murder. Dalits were attacked in Una, women from Dalit community were
raped. Even as you begin to list examples, your heart sinks with hopelessness.
Are we going to leave
behind some days of unabated equality and happiness to our future generations?
If the days of love and affection are scarce, what’s the point in writing,
speaking or practicing any art?
You are aware of that
circular from central government that is meant for Urdu writers. The writers in
Urdu language have been asked to……………….
This is not a mere
stereotype or bias. Instead, this is a part of the bigger agenda where the
central government will work to destroy the freedom of writers. We don’t even
have to travel far in that case. In the neighbouring Tamil Nadu, we saw writer
Perumal Murugan was attacked by communal interests over his works.
Now a gradual rise of
attempts of occult that we have been witnessing is on the Vachana Sahitya that
was created in 12th century. This literature was created as part of
people’s movement that was the result of reformative thoughts that surfaced
with a lot of passion during that time.
How do you begin to
understand the fact that state becomes a witness to an event or a seminar where
puranas are being referred to, and science if being ridiculed or made light of?
Puranas are being projected as facts for public consumption. The epics that
were created at various phases of time, are being appropriated and projected as
accounts of reality. This pulling of wool infront of people’s eyes is happening
in broad daylight. It’s happening right in front of us.
The culture of Harmony in Karnataka is something that fills my heart with
immense pride. The first ever novel in Kannada according to historians,
Kavirajamarga was written under the watchful eyes of a kingly state. And yet,
the novel goes beyond its limitations and speaks greatly for the people.
The
poet in this ‘Kavirajamarga’ novel says:
ಕಸವರವೆಂಬುದೇಂ ನೆರೆ ಸೈರಿಸಲಾರ್ಪಡೆ
ಪರಧರ್ಮಂ ಪರವಿಚಾರಮುಮಮ್
ಪರಧರ್ಮಂ ಪರವಿಚಾರಮುಮಮ್
Tuesday 6 December 2016
ಶಿರಸಿಯಲ್ಲೊಂದು ಚಾರಿತ್ರಿಕ ಮಹಿಳಾ ಸಮಾವೇಶ “ಸಹಿಷ್ಣುತೆ ಎಂಬುದು ಗೆಲುವು”
“ಸಹಿಷ್ಣುತೆ ಎಂಬುದು ಗೆಲುವು” ಎಂಬುದು ಒಂದು ಮಹಿಳಾ ಸಮಾವೇಶದ ಹೆಸರಿದ್ದರೆ ನೀವು ಅಂತಹ ಸಮಾವೇಶದಿಂದ ಏನು ನಿರೀಕ್ಷಿಸುತ್ತೀರಿ? ಬಹುಶಃ ಮಹಿಳೆಯರು ಪುರುಷರ ಬಗ್ಗೆ, ತಮ್ಮ ಮೇಲೆ ನಡೆಯುತ್ತಿರುವ ತಾರತಮ್ಯ, ಅನ್ಯಾಯ, ದೌರ್ಜನ್ಯಗಳ ಬಗ್ಗೆ ‘ಸಹಿಷ್ಣು’ಗಳಾಗಿರಬೇಕೆಂಬ ಉಪದೇಶ/ಅಜೆಂಡಾ ಇರಬಹುದು ಅಂತ. ಆದರೆ ಈ “ಮಹಿಳಾ ಕರ್ನಾಟಕ ಸಮಾವೇಶ”ದಲ್ಲಿ ನಡೆದದ್ದು ಬೇರೆನೇ. “ಸಹಿಷ್ಣುತೆ’ ಮತ್ತು “ಗೆಲುವು”ಗಳಿಗೆ ಈ ಸಮಾವೇಶ ಬೇರೆನೇ ಫೆಮಿನಿಸ್ಟ್ ಭಾಷ್ಯ ಬರೆಯಿತು. ಹೆಸರು ಮಾತ್ರವಲ್ಲ ಈ ಸಮಾವೇಶದ ಪರಿಕಲ್ಪನೆಯೇ ವಿಶಿಷ್ಟವಾಗಿತ್ತು. ಮಹಿಳಾ ಸಾಹಿತಿಗಳು, ಚಿಂತಕರು, ಹೋರಾಟಗಾರರು ಹಾಗೂ ಇದ್ಯಾವುದೂ ಅಲ್ಲದ ಸಾಮಾನ್ಯ ಮಹಿಳೆಯರನ್ನು ಒಂದು ಕಡೆಗೆ ತಂದು ಅರ್ಥಪೂರ್ಣ ಸಂವಾದ ಸಾಧ್ಯವಾಗಿಸಿದ್ದು ಬಹುಶಃ ಹಿಂದೆಂದೂ ನಡೆಯದ್ದು. ಆ ಅರ್ಥದಲ್ಲಿ ನಿಜವಾಗಿಯೂ ಚಾರಿತ್ರಿಕ.
ಈ ವಿಶಿಷ್ಟ ಮಹಿಳಾ ಸಮಾವೇಶದ ಗೋಷ್ಟಿಗಳೂ, ಗೋಷ್ಟಿಗಳ ಹೆಸರುಗಳೂ, ಅಲ್ಲಿ ನಡೆದದ್ದೂ ಅಷ್ಟೇ ವಿಶಿಷ್ಟವಾಗಿದ್ದವು. “ನಮ್ಮ ಲೋಕ ನಮ್ಮ ಬದುಕು” ನಲ್ಲಿ ಮಹಿಳೆಯರ ಅನುಭವ ಲೋಕ ತೆರೆದುಕೊಂಡಿತು. “ನಮ್ಮ ಅರಿವು ನಮ್ಮ ನಡೆ” ಮಹಿಳಾ ಚಿಂತಕರ ಚಾವಡಿಯಾಯಿತು. “ನಮ್ಮ ಭಾವ ನಮ್ಮ ರಾಗ”ದಲ್ಲಿ ಮಹಿಳೆಯರ ಕಾವ್ಯ ಓದು ಗಾಯನ ಕೇಳಿ ಬಂತು. “ನಮ್ಮ ನೋಟ ನಮ್ಮ ನುಡಿ” ಮಹಿಳಾ ಸಾಹಿತ್ಯದ ಚರ್ಚಾ ವೇದಿಕೆಯಾಯಿತು. “ನಮ್ಮ ಮಾತು ನಮ್ಮ ಹಕ್ಕು” ಮಹಿಳಾ ಚಳುವಳಿಯ ಬಗೆಗಾಗಿತ್ತು. ಜಿ.ಎಸ್.ಎಸ್. ಅವರ “ಸ್ತ್ರೀ ಅಂದರೆ ಅಷ್ಟೇ ಸಾಕೆ?” ‘ಕಾವ್ಯರಂಗ’ ಎಂಬ ವಿಶಿಷ್ಟ ಕಲಾಭಿವ್ಯಕ್ತಿಯಲ್ಲಿ ಮೂಡಿ ಬಂತು. ಸಮಾವೇಶದ ಹರವು, ಆಳ ಎಷ್ಟಿತ್ತೆಂದರೆ ಅದನ್ನು ವರದಿ ಮಾಡುವುದು ಕಷ್ಟ. ಕೆಲವು ನೆನಪಿನಲ್ಲಿ ಉಳಿದು ಹೋಗುವ ಕೆಲವರ ಮಾತುಗಳಿಂದಷ್ಟೇ ಅದರ ಅಂದಾಜು ಮಾಡಬಹುದು. ಅಂತಹ ಕೆಲವು ಮಾತುಗಳನ್ನು ಗೋಷ್ಟಿಯಲ್ಲಿ ಕೊಡಲಾಗಿದೆ.
ಸಮಾವೇಶದ ಆಶಯ ಮಾತುಗಳನ್ನಾಡಿದ ಡಾ.ವಿನಯಾ
ಒಕ್ಕುಂದ, ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಸಾಧ್ಯವಿರದ ಪರಿಸ್ಥಿತಿ ಕುರಿತು ತಮ್ಮ ಅನುಭವಗಳನ್ನುಹಂಚಿಕೊಂಡರು.
ರಾಘವೇಶ್ವರ ಸ್ವಾಮಿ ಅತ್ಯಾಚಾರ ಪ್ರಕರಣದ ಚರ್ಚೆ ಮತ್ತು ಪರಿಣಾಮ, ಬುರ್ಖಾ ಧರಿಸಿ ಬರುವ ವಿದ್ಯಾರ್ಥಿನಿಯರನ್ನು
ವಿರೋಧಿಸಿ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಹೊದ್ದು ಬರುತ್ತಿರುವ ಬೆಳವಣಿಗೆಗಳ ಕುರಿತು ಆತಂಕ
ವ್ಯಕ್ತಪಡಿಸಿದರು.
ಉದ್ಘಾಟನಾ ಭಾಷಣ ಮಾಡಿದ ಹಿರಿಯ ಲೇಖಕಿ ಬಾನು ಮುಷ್ತಾಕ್ ಮಾತನಾಡಿ, “ಇಂದು ಭಿನ್ನ ಅಭಿಪ್ರಾಯ
ಹೊಂದಿರುವುದೇ ದೊಡ್ಡ ಅಪರಾಧವೆಂದೂ ಅದಕ್ಕೆ ಹಣೆಗೆ ಗುಂಡಿಕ್ಕುವುದೇ ಶಿಕ್ಷೆ ಎಂದೂ ಬಹಿರಂಗ ಹೇಳಿಕೆ
ನೀಡುವವರ ಮತ್ತು ಅದನ್ನು ಮಾಡಿ ತೋರಿಸುವವರ ನಡುವೆ ನಾವಿದ್ದೇವೆ. ಇಂಥವರ ಅಸಹಿಷ್ಣುತೆಗೆ ಸಹಿಷ್ಣುತೆಯೇ
ಮದ್ದು. ಭಿನ್ನಾಭಿಪ್ರಾಯ ಮಾರಕವಲ್ಲ. ಭಿನ್ನತೆಯ ನಡುವೆಯೂ ಸಂವಾದ ಸಾಧ್ಯ ಅನ್ನುವುದನ್ನು ನೆಚ್ಚಿಕೊಂಡವರು
ನಾವು. ಭಿನ್ನಾಭಿಪ್ರಾಯಗಳನ್ನು ಗೌರವಿಸುವ, ಟೀಕೆ - ವಿಮರ್ಶೆಗಳನ್ನು ಆರೋಗ್ಯದಿಂದ ಸ್ವೀಕರಿಸುವ ಮನೋಭಾವವನ್ನು
ಈ ರೀತಿಯ ಕಾರ್ಯಕ್ರಮಗಳ ಮೂಲಕ ರೂಢಿಗೊಳಿಸಬೇಕು” ಎಂದರು.
ಅತಿಥಿಗಳಾಗಿದ್ದ ಡಾ. ವಸುಂಧರಾ ಭೂಪತಿ ಅವರು ಮಾತನಾಡಿದರು. “ಎಲ್ಲಿ ಸಹಭಾಗಿತ್ವ ಇದೆಯೋ ಅಲ್ಲಿ ಹೆಣ್ಣನ್ನು ಕೀಳಾಗಿ ನೋಡಲು ಸಾಧ್ಯವೇ ಇಲ್ಲ. ಹೆಣ್ಣನ್ನು ಅಡುಗೆಮನೆಗೆ ಸೀಮಿತವಾಗಿಸಿದ ನಂತರದಿಂದ ಭೇದಭಾವ ಶುರುವಾಯ್ತು. ಕ್ರಮೇಣ ಸಾಮಾಜಿಕ ಉತ್ಪಾದನಾ ಕ್ಷೇತ್ರದಿಂದ ಆಕೆಯನ್ನು ಹೊರಗಿಡಲಾಯ್ತು.” ಎಂದು ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕನ್ನಡ ಪುಸ್ತಕ ಪ್ರಾಧಿಕಾರದ ಡಾ. ಬಂಜಗೆರೆ ಜಯಪ್ರಕಾಶ ಮಾತನಾಡಿದರು.. ಉದ್ಘಾಟನಾ ಸಮಾರಂಭದಲ್ಲಿ ಸಿದ್ದಿ ಡಮಾಮಿ ನೃತ್ಯ ಪ್ರದರ್ಶಿಸಲಾಯಿತು. ಉದ್ಘಾಟನಾ ಸಮಾರಂಭದ ನಿರ್ವಹಣೆಯನ್ನು ದೀಪಾ ಹಿರೇಗುತ್ತಿಯವರು ಮಾಡಿದರು.
“ನಮ್ಮ ಲೋಕ ನಮ್ಮ ಬದುಕು” ಗೋಷ್ಟಿಯಲ್ಲಿ ಕರ್ನಾಟಕ
ಸಿಐಟಿಯು ಅಧ್ಯಕ್ಷರಾದ ಎಸ್.ವರಲಕ್ಷ್ಮಿ ಅವರು ಅಂಗನವಾಡಿ, ಬಿಸಿಯೂಟ, ಆಶಾ ಕಾರ್ಯಕರ್ತೆಯರ ಮತ್ತಿತರ
ಮಹಿಳಾ ಕಾರ್ಮಿಕರ ಹಾಗೂ ದುಡಿಯುವ ಮಹಿಳೆಯರ ಸಾಮಾನ್ಯವಾಗಿ
ಬೆಳಕಿಗೆ ಬಾರದ ಅನುಭವ ಲೋಕವನ್ನು ಬಿಚ್ಚಿಟ್ಟರು. ಎಲ್ಲಾ ದುಡಿಯುವ ಮಹಿಳೆಯರ ಡಬ್ಬಲ್ ದುಡಿಮೆಗಳ ದೈನಂದಿನ
ಬವಣೆಗಳ, ಮತ್ತು ತಮ್ಮ ಬದುಕು ಉತ್ತಮ ಪಡಿಸಿಕೊಳ್ಳಲು ಹಕ್ಕು ಸಾಧಿಸಲು ನಡೆಸಿದ ಹೋರಾಟಗಳ ಏಳು-ಬೀಳುಗಳ
ಲೋಕವನ್ನು ಹಂಚಿಕೊಂಡರು. ಭಾರತಿ ಹೆಗಡೆ ಪತ್ರಕರ್ತರ ಮತ್ತು ಅವರ ಅನುಭವಕ್ಕೆ ಬರುವ ಮಹಿಳೆಯರ ಲೋಕವನ್ನು
ತೆರೆದಿಟ್ಟರು. ಎಲ್ಲರೂ ತಾತ್ಸಾರದಿಂದ ಅನುಮಾನದಿಂದ ಕಾಣುವ ತೃತೀಯ ಲಿಂಗಿಗಳ ಬದುಕಿನ ಬಗ್ಗೆ ಡಾ. ಅಕ್ಕೈ ಪದ್ಮಶಾಲಿ ಮಾತನಾಡಿದರು. ಜ್ಯೂಲಿಯಾನ
ಫೆರ್ನಾಂಡೀಸ್ ಸಿದ್ದಿ ಜನಾಂಗದ ಮಹಿಳೆಯರ ಅನುಭವ ಲೋಕವನ್ನು ಪರಿಚಯಿಸಿದರು. ಕೆ. ಷರೀಫಾ ಗೋಷ್ಟಿಯ
ಅಧ್ಯಕ್ಷತೆ ವಹಿಸಿದ್ದರು. ಚಾಂದನಿ ಮತ್ತು ರೇಣುಕಾ ಹೆಳವರ ಕವಿತೆ ಓದಿದರು.ಸುಧಾ ಆಡುಕಳ ಗೋಷ್ಟಿಯನ್ನು
ನಿರ್ವಹಿಸಿದರು.
“ನಮ್ಮ ಅರಿವು ನಮ್ಮ ನಡೆ” ಗೋಷ್ಟಿ ಮಹಿಳಾ ಚಿಂತನೆಗೆ ಮುಡಿಪಾಗಿತ್ತು. ಡಾ. ಎಚ್.ಎಸ್. ಅನುಪಮಾ ಮತ್ತು ಡಾ. ಗೀತಾ ವಸಂತ ಮಹಿಳಾ ಸಾಹಿತ್ಯ ಮತ್ತು ಚಳುವಳಿಗೆ ಮೂಲವಾದ ಇಂದಿನ ಮಹಿಳಾ ಚಿಂತನೆಯ ದಿಕ್ಕು ದೆಸೆಗಳ ಪರಿಚಯ ಮಾಡಿದರು. ಡಾ. ಎಂ.ಎಸ್.ಆಶಾದೇವಿ ಅಧ್ಯಕ್ಷತೆ ವಹಿಸಿದ್ದರು. ಗಿರಿಜಾ ಹೆಗಡೆ ಮತ್ತು ಮಾನಸಾ ಹೆಗಡೆ ಕವಿತೆ ಓದಿದರು. ಶ್ರೀದೇವಿ ಕೆರೆಮನೆ ಗೋಷ್ಟಿಯನ್ನು ನಿರ್ವಹಿಸಿದರು.
“ನಮ್ಮ ನೋಟ ನಮ್ಮ ನುಡಿ” ಗೋಷ್ಟಿ ಮಹಿಳಾ ಸಾಹಿತ್ಯದ
ಇಂದಿನ ಚರ್ಚೆಗಳನ್ನು ಎತ್ತಿಕೊಂಡಿತು. ಅಧ್ಯಕ್ಷತೆ ವಹಿಸಿದ್ದ ಮಹಿಳಾ ವಿ.ವಿ.ಯ ಡಾ. ಸುನಂದಮ್ಮ ಆರ್.,
ಹಾಗೂ ಡಾ. ಸಬಿತಾ ಬನ್ನಾಡಿ, ಡಾ. ತಾರಿಣಿ ಶುಭದಾಯಿನಿ ಮಹಿಳಾ ಸಾಹಿತ್ಯದ ಬಗ್ಗೆ ಇಂದಿನ ಒಳನೋಟಗಳನ್ನು
ಕೊಟ್ಟರು. ಪ್ರಜ್ಞಾ ಮತ್ತಿಹಳ್ಳಿ ಮತ್ತು ರೇಣುಕಾ ರಮಾನಂದ ಕವಿತೆ ಓದಿದರು. ಕಾವ್ಯ ನಾಯ್ಕ ಗೋಷ್ಟಿಯ
ನಿರ್ವಹಣೆ ಮಾಡಿದರು.
“ನಮ್ಮ ಮಾತು ನಮ್ಮ ಹಕ್ಕು” ಗೋಷ್ಟಿಯಲ್ಲಿ ಮಹಿಳಾ
ಚಳುವಳಿಯ ಇಂದಿನ ಸ್ಥಿತಿ, ಸೋಲು-ಗೆಲುವು, ಸವಾಲು-ಸಾಧ್ಯತೆಗಳನ್ನು ತೆರೆದಿಟ್ಟವರು ಜನವಾದಿ ಮಹಿಳಾ
ಸಂಘಟನೆಯ ಕೆ. ನೀಲಾ ಮತ್ತು ಡಾ. ಅನುಸೂಯಾ ಕಾಂಬ್ಳೆ. ಡಾ. ಎನ್. ಗಾಯತ್ರಿ ಅಧ್ಯಕ್ಷತೆ ವಹಿಸಿದ್ದರು.
ಅಕ್ಷತಾ ಹುಂಚನಕಟ್ಟೆ ಮತ್ತು ಅಂಜಲಿ ಬೆಳೆಗಲಿ ಅವರು
ಕವಿತೆ ಓದಿದರು.ಯಮುನಾ ಗಾಂವ್ಕರ್ ಗೋಷ್ಟಿಯನ್ನು ನಿರ್ವಹಿಸಿದರು.
ಈ ಗೋಷ್ಟಿಗಳಲ್ಲದೆ ಸಮಾವೇಶದಲ್ಲಿ ಮಹಿಳಾ
ಕಾವ್ಯಧಾರೆ ಹರಿಯಿತು. ಕಾವ್ಯ ಓದು-ಗಾಯನಕ್ಕೆ ಮೀಸಲಾಗಿದ್ದ
“ನಮ್ಮ ಭಾವ ನಮ್ಮ ರಾಗ” ಗೋಷ್ಟಿಯಲ್ಲಿ ಡಾ. ಹೇಮಾ ಪಟ್ಟಣಸೆಟ್ಟಿ, ಭಾಗೀರಥಿ ಹೆಗಡೆ, ಡಾ. ಮಾಧವಿ
ಎಸ್. ಭಂಡಾರಿ, ಸುನಂದಾ ಕಡಮೆ, ಸುಧಾ ಚಿದಾನಂದಗೌಡ,
ಚೇತನಾ ತೀರ್ಥಹಳ್ಳಿ, ತಮ್ಮ ಕವನ ಗಳನ್ನು ಓದಿದರು. ಡಾ. ಸುಕನ್ಯಾ ಮಾರುತಿ ಅದ್ಯಕ್ಷತೆ ವಹಿಸಿದ್ದರು.
ಜಾನಪದ ಹಾಡುಗಾರ್ತಿ ನುಗ್ಗಿ ಗೌಡ ಅತಿಥಿಗಳಾಗಿದ್ದರು. ಇದಲ್ಲದೆ ಹಲವು ಕವನಗಳ ಗಾನ ಸ್ಪಂದನ ನಡೆಯಿತು.
ಡಾ. ಶ್ರೀಪಾದ ಭಟ್ ಅವರ ಸಂಗೀತ ಸಂಯೋಜನೆಯಲ್ಲಿ ವಿದ್ವಾನ ವಿಶ್ವನಾಥ ಹಿರೇಮಠ, ದೇವಾನಂದ ಗಾಂವ್ಕರ್
ಮುಂತಾದವರು ಗಾಯನ ಮಾಡಿದರು. ಈ ಗೋಷ್ಟಿಯ ನಿರ್ವಹಣೆಯನ್ನು ಸಿಂಧು ಹೆಗಡೆ ಮಾಡಿದರು. ಈ ಗೋಷ್ಠಿಯನ್ನು
ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಉತ್ತರ ಕನ್ನಡ ಆಯೋಜಿಸಿತ್ತು. ಕಾವ್ಯಕ್ಕೆ ಮೀಸಲಾಗಿದ್ದ ಗೋಷ್ಟಿಯಲ್ಲದೆ,
ಪ್ರತಿ ಗೋಷ್ಟಿಯಲ್ಲೂ ಎರಡು ಕವಿಗಳ ಕಾವ್ಯಸ್ಪಂದನ ಇದ್ದಿದ್ದು ಸಮಾವೇಶದ ಇನ್ನೊಂದು ವಿಶಿಷ್ಟತೆಯಾಗಿತ್ತು.
ಮಹಿಳಾ ವಿ.ವಿ. ಕುಲಪತಿ ಡಾ.
ಸಬಿಹಾ ಭೂಮಿಗೌಡ ಅವರು ಸಮಾರೋಪ ಮಾತುಗಳನ್ನಾಡುತ್ತಾ “ನಮ್ಮ ಅನುಭವ ವಿಸ್ತಾರಗೊಳ್ಳಬೇಕು ಅಂದರೆ ನಮ್ಮ
ಮಾತು ಮತ್ತು ಬದುಕುಗಳು ಒಂದಾಗಬೇಕು. ಆಗಷ್ಟೇ ನಮ್ಮ ಬರಹ ಸೂಕ್ಷ್ಮಗೊಳ್ಳಲು, ಮೊನಚು ಪಡೆಯಲು ಸಾಧ್ಯ…
.. ಈ ಎರಡು ದಿನಗಳ ಕಾಲ ಭಿನ್ನ ವೇದಿಕೆ, ಭಿನ್ನ ವೇದನೆಗಳ ದನಿಯನ್ನು ಇಲ್ಲಿ ಆಲಿಸಿದ್ದೇವೆ. ಅದಕ್ಕೆ
ತಕ್ಕಂತೆ ಸಹಿಷ್ಣು – ಅಸಹಿಷ್ಣುತೆಯ ಬದಲಾವಣೆಗಳನ್ನು, ಭವಿಷ್ಯದ ನಡೆಯನ್ನು ರೂಪಿಸಿಕೊಳ್ಳುವುದಕ್ಕೆ
ಇಂಬುಕೊಟ್ಟಿದೆ” ಎಂದು ಕಿವಿಮಾತು ಹೇಳಿದರು. “ಇತ್ತೀಚಿನ ವರ್ಷಗಳಲ್ಲಿ ಎಡಪಂಥೀಯರು ಎಲ್ಲೆಗಳನ್ನು ದಾಟಿ ಹೊಸ ಗುಂಪುಗಳನ್ನು
ಒಳಗೊಳ್ಳುತ್ತ, ಹೊಸತಲೆಮಾರನ್ನು ತಲುಪುವ ಕೆಲಸ ಮಾಡುತ್ತಿದೆ. ಇದು ಒಳ್ಳೆಯ ಬೆಳವಣಿಗೆ. ವಿವಿಧ ಗುಂಪು
– ಕ್ಷೇತ್ರಗಳ ಜೊತೆ ಸಂವಹನಕ್ಕೆ ಸಾಹಿತ್ಯ ಅತ್ಯಂತ ಪರಿಣಾಮಕಾರಿಯಾದ ಮಾಧ್ಯಮ. ಇದನ್ನು ಸಮರ್ಥವಾಗಿ
ಬಳಸಿಕೊಳ್ಳಬೇಕು” ಎಂದವರು ಹೇಳಿದರು. ಅತಿಥಿಗಳಾಗಿದ್ದ ಜನವಾದಿ
ಮಹಿಳಾ ಸಂಘಟನೆಯ ಕೆ.ಎಸ್.ವಿಮಲಾ ಮತ್ತು ಅಧ್ಯಕ್ಷತೆ ವಹಿಸಿದ್ದ ಬಂಜಗೆರೆ ಜಯಪ್ರಕಾಶ ಮಾತನಾಡಿದರು.
ವಿಠ್ಠಲ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ನಂತರ “ಬಹುಮುಖ”
ಹುಣಸೂರು ಇವರು ಪ್ರಸ್ತುತ ಪಡಿಸಿದ :ಸ್ತ್ರೀ ಅಂದರೆ ಅಷ್ಟೇ ಸಾಕೇ?” ಎನ್ನುವ ಕಾವ್ಯ ರೂಪಕವನ್ನು ಸುಂದರವಾಗಿ
ಪ್ರದರ್ಶಿಸಿದರು. ಸುಮಾರು 20 ಶಾಲಾ ವಿದ್ಯಾರ್ಥಿಗಳು ಚುರುಕಾಗಿ ಕನ್ನಡ ಸಾಹಿತ್ಯದ ಹಲವು ಭಾಗಗಳನ್ನು
ಶಿಲ್ಪಾ ಎಸ್ ಅವರು ನಿರ್ದೇಶಿಸಿದರು. ಚಿಂತನ ರಂಗ ಅಧ್ಯಯನ ಕೇಂದ್ರ, ಉತ್ತರ ಕನ್ನಡ ಮತ್ತು ಕನ್ನಡ
ಮತ್ತು ಸಂಸ್ಕ್ರತಿ ಇಲಾಖೆ ಉತ್ತರ ಕನ್ನಡ ಿದನ್ನು ಆಯೋಜಿಸಿತ್ತು.
Subscribe to:
Posts (Atom)