http://samudaya.kundapura.org/2017/04/rangarangu17.html
ಸಮುದಾಯವು
ಕಳೆದೈದು ವರ್ಷಗಳಿಂದಲೂ ಮಕ್ಕಳಿಗಾಗಿ ಉಚಿತ ರಜಾಮೇಳವನ್ನು ನಿಯಮಿತವಾಗಿ
ನಡೆಸುತ್ತಾ ಬಂದಿದೆ. ಮಕ್ಕಳ ರಜಾಮೇಳಗಳು
ವ್ಯಾಪಾರವಾಗಬಾರದು ಎಂಬ ಕಾಳಜಿಯಿಂದ ರಂಗರಂಗು
ರಜಾಮೇಳದಲ್ಲಿ ಭಾಗವಹಿಸುವ ಮಕ್ಕಳಿಂದ ಪ್ರವೇಶಶುಲ್ಕವಿರುವುದಿಲ್ಲ. ಮೇಳದಲ್ಲಿ ಸರಕಾರಿ ಶಾಲೆಯ ವಿದ್ಯಾರ್ಥಿಗಳು
ಮತ್ತು ವಲಸೆ ಕಾರ್ಮಿಕ ವಿದ್ಯಾರ್ಥಿಗಳಿಗೆ
ಪ್ರಾಶಸ್ತ್ಯದ ಮೇಲೆ ಪ್ರವೇಶ ನೀಡಲಾಗುತ್ತದೆ.
ಈ ವರ್ಷದ ಮೇಳವು ಎಪ್ರಿಲ್
23 ರಿಂದ ಮೇ 2 ರವರೆಗೆ ನಡೆಯುತ್ತದೆ.
ಈ ರಜಾಮೇಳದಲ್ಲಿ ನೆಲಮೂಲದ
ಸಂಸ್ಕøತಿಯನ್ನು ಮಕ್ಕಳಿಗೆ ಪರಿಚಯಿಸುವ
ಉದ್ದೇಶವಿದೆ. ಮಕ್ಕಳ ಅಸಾಧಾರಣ ಕ್ರಿಯಾಶಕ್ತಿಯನ್ನು
ಉದ್ಧೀಪಿಸುವ, ಅವರ ವ್ಯಕ್ತಿತ್ವವನ್ನು ನೆಲದೊಡನೆ
ಬೆಸೆಯುವ, ಜಾತಿ-ಮತ-ಭಾಷೆಗಳ
ಹೆಸರಿನಲ್ಲಿ ನಾವು ನಿರ್ಮಿಸಿಕೊಂಡಿರುವ ಗೋಡೆಗಳನ್ನು
ಮೀರಿ ಮನುಷ್ಯತ್ವದ ವಿಶಾಲ ಕುಟುಂಬದೊಳಗೆ ಬದುಕುವದನ್ನು
ಕಲಿಯಲು ಈ ಮೇಳದಲ್ಲಿ ಒತ್ತು
ನೀಡಲಾಗುವುದು. ಮೇಳದ ಭಾಗವಾಗಿ ಮಕ್ಕಳು
ಹೊರಸಂಚಾರ, ಮಕ್ಕಳ ಸಂತೆ, ಕಛೇರಿ
ಭೇಟಿಗಳನ್ನು ಮಾಡುವರು.
ಪ್ರತಿ ವರ್ಷದಂತೆ ಮೇಳದ ಮಕ್ಕಳು ಈ
ವರ್ಷವೂ ಮೇಳದ ಸಮಾರೋಪ ಸಮಾರಂಭದಲ್ಲಿ
ನಾಟಕ ಪ್ರದರ್ಶನವನ್ನು ನೀಡಲಿರುವರು. ನಮ್ಮನ್ನಗಲಿದ ಕಲಾವಿದ, ಹಿತೈಷಿ ಭೋಜುಹಾಂಡ
ಅವರ ನೆನಪುಗಳಿಗೆ ಈ ಮೇಳವು ಋಣಿಯಾಗಿರುವುದು.
No comments:
Post a Comment