ಸಮುದಾಯ ಬಿಇಎಂಎಲ್ನಗರ, ಕೆಜಿಎ¥sóï, “ವಿಶ್ವರಂಗಭೂಮಿ ದಿನಾಚರಣೆ” ಯನ್ನು ದಿನಾಂಕ 27.03.2017 sಸೋಮವಾರ ಬಿಎಂಶ್ರೀ ಭವನದಲ್ಲಿರುವ ಗುಬ್ಬಿವೀರಣ್ಣ ರಂಗಮಂದಿರದಲ್ಲಿ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿ ಈ ಬಾರಿ ಸನ್ಮಾನಕ್ಕೆ ಪಾತ್ರರಾದ ಹಿರಿಯ ರಂಗಕರ್ಮಿ ಹಾಗೂ ಸಮುದಾಯ ಕೆಜಿಎ¥sóï ಘಟಕದ ಸಂಸ್ಥಾಪಕ ಸಂಚಾಲಕರಾಗಿದ್ದ ಶ್ರೀ ಎಸ್.ಕೃಷ್ಣಮೂರ್ತಿ (ಕಿಟ್ಟಿ ಎಂದೇ ಪ್ರಖ್ಯಾತ) ಮಾತನಾಡುತ್ತಾ ಸಮುದಾಯದ ಇಲ್ಲಿನ ಘಟಕವನ್ನು ಆರಂಭಿಸಿದ ಬಗೆ ಮತ್ತು ಅಂದು ದೇಶದಲ್ಲಿ ಇದ್ದ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಸಮುದಾಯದಂತಹ ಸಾಂಸ್ಕøತಿಕ ಸಂಘಟನೆಯೊಂದು ಕೆಜಿಎ¥sóïನ ರಂಗಭೂಮಿಗೆ ಅಧುನಿಕ ರಂಗಭೂಮಿಯ ಪರಿಚಯವನ್ನು ಮಾಡಿ ಕೊಟ್ಟಿದ್ದೇ ಕತ್ತಲೆ ದಾರಿ ದೂರ ನಾಟಕದ ಪ್ರದರ್ಶನದ ಮೂಲಕವೇ ಎಂಬುದು ಈಗ ಇತಿಹಾಸದ ಭಾಗವಾಗಿದೆ ಎಂದರು.00 ಇಂದು ಮಕ್ಕಳು ಶಾಲೆಯಲ್ಲಿನ ಓದು ಮತ್ತು ಗ್ಯಾಜೆಟ್ಲೋಕದಲ್ಲಿ ಮುಳುಗಿಹೋಗಿದ್ದಾರೆ. ರಂಗಭೂಮಿಗೆ ಅವರನ್ನು ಕರೆತರುವ ಮೂಲಕ, ತಮ್ಮ ಸುತ್ತಲಿನ ಸಮಾಜವನ್ನು ನೋಡುವ ಬಗೆ ಮತ್ತು ಸವಾಲುಗಳನ್ನು ಎದುರಿಸಿ ಒಬ್ಬ ಪ್ರಜ್ಞಾವಂತ ನಾಗರೀಕರನ್ನಾಗಿ ಮಾಡುವಂತಹ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ, ಆದ ಕಾರಣ ತಮ್ಮ ಮಕ್ಕಳನ್ನು ರಂಗಭೂಮಿಗೆ ಕಳುಹಿಸಿಕೊಡಿ ಎಂದು ನೆರೆದ ಎಲ್ಲಾ ಪೋಷಕರಲ್ಲಿ ವಿನಂತಿಸಿದರು.
ಇನ್ನೊಬ್ಬ ಅತಿಥಿಯಾಗಿ ಮತ್ತು ಸನ್ಮಾನವನ್ನು ಸ್ವೀಕರಿಸಿದ ಶ್ರೀ ಬಿ.ಆರ್.ಸೆಲ್ವಪಿಳ್ಳೈ (ಶೆಲ್ಲಿ ಎಂದೇ ಪ್ರಖ್ಯಾತ) ಹಿರಿಯ ರಂಗಕರ್ಮಿ ಮತ್ತು ಈ ಘಟಕದ ಮಾಜೀ ಅಧ್ಯಕ್ಷರು ಮಾತನಾಡುತ್ತಾ ನಾನೂ ಕೂಡ ಕತ್ತಲೆ ದಾರಿ ದೂರ ನಾಟಕದ ಮೂಲಕ ನಾನೊಬ್ಬ ಮನುಷ್ಯನಾಗಿದ್ದು ಹಾಗೂ ನಮ್ಮ ಸುತ್ತಲಿನ ಸಮಾಜದಲ್ಲಿ ಎಂತೆಂತಹ ಮನುಷ್ಯರು ಇದ್ದಾರೆ ಅವರನ್ನು ನಾವು ಹೇಗೆ ನೋಡಬೇಕು ಎಂದು ಕಲಿಸಿದ್ದು ಸಮುದಾಯ ಎಂದು ಹೆಮ್ಮೆಯಿಂದ ಹೇಳುತ್ತೇನೆ, ರಂಗಭೂಮಿ ಎನ್ನುವುದು ಒಂದು ಚಳುವಳಿ ಇದರ ಮೂಲಕ ನಾವು ಸಮಾಜದ ನೋವು ನಲಿವುಗಳಿಗೆ ಪ್ರತಿಸ್ಪಂದಿಸಬಹುದಾಗಿದೆ. ಇಂದು ಬೆಮೆಲ್ ಖಾಸಗೀಕರಣಕ್ಕೆ ಜಾರುತ್ತಿರುವ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಇತ್ತೀಚೆಗೆ ಅಂಗನವಾಡಿಯವರು ನಡೆಸಿದ ಹೋರಾಟದಂತೆ ಎಲ್ಲಾ ಬೆಮೆಲ್ ಕುಟುಂಬದವರು ಮುಖ್ಯವಾಗಿ ಮಹಿಳೆಯರು ಅನಿರ್ದಿಷ್ಟ ಹೋರಾಟವನ್ನು ರೂಪಿಸಿದರೆ ಎಂತಹ ಸರಕಾರವಾದರೂ ಕೂಡ ತಮ್ಮ ತೀರ್ಮಾನಗಳನ್ನು ಬದಲಿಸಲೇ ಬೇಕಾದಂತಹ ಅನಿವಾರ್ಯತೆ ಬರುತ್ತದೆ ಎಂದರು.
ಈ ಇಬ್ಬರು ಸನ್ಮಾನಿತರ ಕುರಿತು ಸಮುದಾಯ ಕರ್ನಾಟಕದ ರಾಜ್ಯ ಅಧ್ಯಕ್ಷರಾದ ಶ್ರೀ ಅಚ್ಯುತ ರವರು ಮಾತನಾಡುತ್ತಾ ಕೆಜಿಎ¥sóï ಸಮುದಾಯ ಘಟಕದ ಮಾತೃ ಸಂಸ್ಥೆಯಾಗಿದ್ದ ಕರ್ನಾಟಕ ಕಲೈ ಇಳೈಕ್ಯ ಮಂಡ್ರಮ್ ( ಕರ್ನಾಟಕ ಕಲೆ ಮತ್ತು ಸಾಹಿತ್ಯ ಮಂಡಳಿ ) ಸಮುದಾಯ ಘಟಕವಾಗಿ ರೂಪುಗೊಂಡ ಬಗೆಯನ್ನು ಹಾಗೂ ಅಂದು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಕತ್ತಲೆ ದಾರಿ ದೂರ ನಾಟಕ ನಮ್ಮೆಲ್ಲರ ಮೇಲೆ ಬೀರಿದ ಪ್ರಭಾವವೇ ಇಂದು ಈ ಘಟಕ ಅತ್ಯಂತ ಕ್ರಿಯಾಶೀಲವಾಗಿರುವುದಕ್ಕೆ ಸಾಕ್ಷಿ. ಸಮುದಾಯ ನಡೆಸಿದ ರಾಜ್ಯವ್ಯಾಪಿ ಚಾರಿತ್ರಿಕ ಜಾತಾ ಒಂದು ಭಾಗ ಕೆಜಿಎ¥sóï ನಿಂದ ಹೊರಟಿದ್ದನ್ನು ನೆರೆದ ಎಲ್ಲಾ ರಂಗಾಸಕ್ತರಿಗೆ ನೆನಪಿಸಿದರು. ಇಂದು ಸನ್ಮಾನಿತರಾಗಿರುವ ಅತಿಥಿಗಳು ಹಾಕಿದ ಭಧ್ರ ಬುನಾದಿಯೇ ಈ ಸಮುದಾಯ ಘಟಕದ ಇಂದಿನ ಜೀವಾಳ ಎಂದರು.
ಅತಿಥಿಗಳಾಗಿ ಭಾಗವಹಿಸಿದ್ದ ಸಮುದಾಯ ಕರ್ನಾಟಕದ ರಾಜ್ಯ ಉಪಾಧ್ಯಕ್ಷರಾದ ಶ್ರೀ ಟಿ.ಸುರೇಂದ್ರರಾವ್ ರವರು ವಿಶ್ವ ರಂಗಭೂಮಿ ದಿನಾಚರಣೆಯ ಶುಭಾóóಷಯಗಳನ್ನು ತಿಳಿಸಿದರು.
ಘಟಕದ ಅಧ್ಯಕ್ಷರಾದ ಶ್ರೀ ಜಗದೀಶ್ ನಾಯಕ ಮತ್ತು ಉಪಾಧ್ಯಕ್ಷರಾದ ಡಾ|| ವಿನೋದ್ಕುಮಾರ್ ರವರು ಮಾತನಾಡುತ್ತಾ ನೆರೆದ ಎಲ್ಲಾ ರಂಗಾಸಕ್ತರಿಗೆ ರಂಗಭೂಮಿಯಲ್ಲಿ ತಾವು ತೊಡಗಿಸಿಕೊಂಡ ಬಗೆಯನ್ನು ಹಾಗು ಪೋಷಕರುಗಳು ಮಕ್ಕಳು ರಂಗಭೂಮಿಗೆ ಬರುವುದಕ್ಕೆ
ಯಾವುದೇ ಅಡೆತಡೆಗಳನ್ನು ಮಾಡಬೇಡಿ ಎಂದು ವಿನಂತಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಮುದಾಯ-35 ಸಾಮರಸ್ಯ ಜನಸಂಸ್ಕøತಿ ಉತ್ಸವ ಸಮಿತಿಯ ಅಧ್ಯಕ್ಷರಾದ ಡಾ|| ಸಿ.ಕೃಷ್ಣಕುಮಾರ್ ರವರು ಮಾತನಾಡುತ್ತಾ ರಂಗಭೂಮಿಯ ಮೂಲಕ ನಾವು ಕಲಿಯಬೇಕಾಗಿರುವುದು ಸಾಕಷ್ಟಿದೆ, ಸಾಮಾನ್ಯ ಮನುಷ್ಯರಾಗಿದ್ದವರಿಗೆ ಮಾನವೀಯತೆಯನ್ನು ಕಲಿಸಿಕೊಡುತ್ತದೆ. ಸಮುದಾಯದ ಕಾರ್ಯಕ್ರಮಗಳು ಯಶಸ್ವಿಯಾಗಲಿ ಎಂದರು.
ಈ ಕಾರ್ಯಕ್ರಮದಲ್ಲಿ ವಿಶ್ವರಂಗಭೂಮಿ ದಿನಾಚರಣೆಯ ಸಂದೇಶವನ್ನು ಈ ಬಾರಿ ಫ್ರಾನ್ಸ್ ದೇಶದ ರಂಗಭೂಮಿ ನಟಿ ಮತ್ತು ಚಲನಚಿತ್ರ ನಟಿಯಾದ ಇಸಾಬೆಲ್ಲೆ ಹಾಪರ್ಟ್ ನೀಡಿದ ಇಂಗ್ಲೀಷ್ ಭಾಷೆಯ ಸಂದೇಶವನ್ನು ಕನ್ನಡಕ್ಕೆ ಮೈಸೂರಿನ ಶ್ರೀಕಂಠ ಗುಂಡಪ್ಪ ರವರು ಅನುವಾದಿಸಿದ್ದರು. ಈ ಸಂದೇಶವನ್ನು ಕಾರ್ಯಕಾರಿ ಸಮಿತಿಯ ಶ್ರೀ ಶಶಿಧರ ರವರು ಕಾರ್ಯಕ್ರಮ ಮೊದಲಿಗೆ ವಾಚಿಸಿದರು.
ಸ್ವಾಗತ ಶ್ರೀ ಆರ್.ಡಿ.ಅಲಿಕ್, ಪ್ರಾಸ್ತಾವಿಕ ನುಡಿ ಶ್ರೀಮತಿ ¥sóÉ್ಲೂೀರಾ, ವಂದನಾರ್ಪಣೆ ಶ್ರೀಮತಿ ಸುವi, ಆಶಯಗೀತೆ ಮತ್ತು ನಿರೂಪಣೆ ಜನಾರ್ಧನ.
ಸಭಾ ಕಾರ್ಯಕ್ರಮದ ನಂತರದಲ್ಲಿ ಪುಟಾಣಿ ಕಲಾವಿದರಿಂದ ಜಗದೀಶ್ ನಾಯಕ್ ನಿರ್ದೇಶನದಲ್ಲಿ ದೇಶಪ್ರೇಮಿ ಭಗತ್ಸಿಂಗ್ ಮತ್ತು ಕರ್ನಾಟಕ ಹಲಗಲಿ ಬೇಡರನ್ನು ಕುರಿತ ರಂಗದೃಶ್ಯಗಳನ್ನು ಪ್ರದರ್ಶಿಸಲಾಯಿತು. ಹಲವಾರು ರಂಗಗೀತೆಗಳನ್ನು ಪ್ರಸ್ತುತಿಪಡಿಸಲಾಯಿತು.
No comments:
Post a Comment