Monday, 5 June 2017

ಕೆಂಪು ಕಣಗಿಲೆ

ಕೆಂಪು ಕಣಗಿಲೆಅಥವಾ Blood Oleanders ಅಥವಾ ಬಂಗಾಲಿ ಮೂಲದರಕ್ತ ಕೊರೊಬಿಟ್ಯಾಗೋರರ ನಾಟಕ. Where the mind is without fear, where the head is held high...(ಎಲ್ಲಿ ಮನಕಳುಕಿರದ ಎಲ್ಲಿ ತಲೆ ಬಾಗಿರದೋ...) ಇದೇ ನಾಟಕದಲ್ಲಿ ಅಳವಡಿಸಲಾದ ಹಾಡು. ನಾಟಕ ಬಹಳ ಕ್ಲಿಷ್ಟ ಪ್ರತಿಮೆಗಳಿಂದ ಕೂಡಿರುವುದರಿಂದ ಹಾಗೂ ರಾಜಕೀಯ-ಧರ್ಮ-ವ್ಯವಸ್ಥೆ-ಜನ ಎಲ್ಲ ಬಗೆಯ ಸಂಘರ್ಷಗಳನ್ನು ಬಹಳ ಮೆಟಫರಿಕಲ್ ಆಗಿ ಮುಂದಿಡುತ್ತಾ ಹೋಗುವುದರಿಂದ ನಾಟಕ ನಿರ್ದೇಶಿಸುವುದು ಎಲ್ಲ ನಿರ್ದೇಶಕರ ಕನಸಾದರೂ ನಾಟಕವೆಂಬ ಮೋಹಿನಿ ದಕ್ಕುವುದು ಅವಳನ್ನು ಒಲಿಸಿ ಓಲೈಸಿದವರಿಗೆ ಮಾತ್ರ.
ಅವಧಿ ಪ್ರಸ್ತುತಪಡಿಸುವ ಶ್ರೀಪಾದ ಭಟ್ಟರ ನಾಟಕೋತ್ಸವದಲ್ಲಿ ನಾಟಕ ಮೈಸೂರಿನನಟನತಂಡದಿಂದ ಪ್ರದರ್ಶನಗೊಳ್ಳಲಿದೆ. ಶ್ರೀಪಾದ ಭಟ್ಟರು ನಿರ್ದೇಶಿಸಿರುವ ನಾಟಕ ನಡೆಯುವುದು ರಂಗದ ಮೇಲಾದರೂ ಅದು ಬೆಳೆದು ಪ್ರತಿದ್ವನಿಸುವುದು ಮಾತ್ರ ಪ್ರೇಕ್ಷಕನ ಎದೆಯಲ್ಲಿ. ಈವತ್ತು ಅದರ ಟೆಕ್ನಿಕಲ್ ರಿಹರ್ಸಲ್ ಇತ್ತು. ಕೆಲವೊಮ್ಮೆ ಹೂವಾಗಿ, ಮತ್ತೊಮ್ಮೆ ಎದೆ ಹೊಕ್ಕು ಕೊಲ್ಲುವ ಗುಂಡಾಗಿ, ಮರುಕ್ಷಣ ಹಾಡಾಗಿ ಮತ್ತೆ ಮತ್ತೆ ಕಾಡುವ ಪ್ರೇಮಿಯಂತೆ ಭಾಸವಾಗುವ ನಾಟಕ ಯಾಕೋ ಬಹಳ ಆಪ್ತವೆನಿಸಿಬಿಟ್ಟಿತು. ಸಂಗೀತವಂತೂ ಅಬ್ಬಾ! ಹಾಡುವ ಧ್ವನಿಯ ಗುಂಗು ಇಳಿಯೋದೇ ಇಲ್ಲವೇನೋ ಎನ್ನಿಸುವ ಹಾಗೆ ಇದೆ. ನಾಟಕದ ಪ್ರತೀ ಅಂಶವೂ ಎಷ್ಟು ರುಚಿಕಟ್ಟಾಗಿದೆ ಅಂದರೆ ಇದನ್ನ ಮಿಸ್ ಮಾಡಿಕೊಂಡರೆ ಅದಕ್ಕಿಂತ ದೊಡ್ಡ ನಷ್ಟ ಇನ್ನೊಂದಿಲ್ಲ. ಮಂಡ್ಯ ರಮೇಶ್ ಅವರು ಕಟ್ಟಿರುವ ಪ್ರತಿಭಾವಂತರ ತಂಡದ ಜೊತೆ ಶ್ರೀಪಾದ ಭಟ್ಟರ ಇಂಟೆನ್ಸಿಟಿ ಸೇರಿಕೊಂಡು ನಾಟಕ ಹೆಂಗೆ ತಯಾರಾಗಿದೆ ಅಂದ್ರೆ ಹಂಗಿಂಗಲ್ಲ!
ಪ್ಲೀಸ್ ಮಿಸ್ ಮಾಡ್ಕೋಬೇಡಿ. ಮೈಸೂರಿನಲ್ಲಿ ಇದರ ಪ್ರದರ್ಶನ ಜೂನ್ ೧೧ ಕ್ಕೆ ಇದೆ. ಬೆಂಗಳೂರಿನಲ್ಲಿ ಅವಧಿ ನಾಟಕೋತ್ಸವದ ಅಂಗವಾಗಿ ಕೆಂಪು ಕಣಗಿಲೆ ಜೂನ್ 16ಕ್ಕೆ ರಂಗಶಂಕರದಲ್ಲಿ ಪ್ರದರ್ಶನವಾಗುತ್ತೆ. ಬಿಟ್ಟದ್ದು ಬಿಟ್ಟು ನಾಟಕ ನೋಡಿ
.


ರಂಗದ ಮೇಲೆ:
ನಂದಿನಿ: ದಿಶಾ ರಮೇಶ್
ಬಿಶು: ಅಖಿಲೇಶ್ ಕೃಷ್ಣ ಮೈಸೂರು
ರಾಜ: ಮೇಘ ಸಮೀರ
ಗವರ್ನರ್: ಋತ್ವಿಕ್ಕೃಪಾಕರ್
ಕೊತ್ವಾಲ: ಚೇತನ್ ಸಿಂಗಾನಲ್ಲೂರು
ಪ್ರೊಫೆಸರ್: ದುಷ್ಯಂತ್ ಸೋಮವಾರಪೇಟೆ
ಪುರಾಣಿಕ: ತಿಲಕ್ಕುಮಾರ್
ಫಗು: ವಿನೋದ್ಕುಂಬಾರಕೊಪ್ಲು
ಚಂದ್ರಾ: ಶಿಲ್ಪ ತಾತನಹಳ್ಳಿ
ಕಿಶೋರ: ಲಾವಣ್ಯ ಮೈಸೂರು
ಗೋಕುಲ: ನಾಗೇಂದ್ರ ಅರಳಗುಪ್ಪೆ
ಕೆಲಸಗಾರ್ತಿ: ವೀಣಾ ನಾಗಮಂಗಲ
ರಂಗದ ಹಿಂದೆ:
ಮೂಲ: ರವೀಂದ್ರನಾಥಟ್ಯಾಗೋರ
ರಂಗರೂಪ: ಸುಧಾ ಆಡುಕಳ
ಸಂಗೀತ ಸಾಂಗತ್ಯ: ಅನುಷ್ ಶೆಟ್ಟಿ, ಮುನ್ನ
ರಂಗ ಸಜ್ಜಿಕೆ: ಎಚ್.ಕೆ.ವಿಶ್ವನಾಥ್
ಬೆಳಕು: ವಿನಯ್ಚಂದ್ರ
ಸಂಘಟನೆ: ರಾಮು ನಟನ, ಸತೀಶ್ ಬೈಕಾಡಿ
ಕಛೇರಿ: ಆನಂದ್ಕೆ.ಎಸ್, ಲಕ್ಷ್ಮಿ ನಾಯಕ್
ಸಹ ನಿರ್ದೇಶನ: ಮೇಘ ಸಮೀರ
ನಟನ ನಿರ್ಮಾತೃ: ಮಂಡ್ಯರಮೇಶ್

ಸಂಗೀತ, ವಿನ್ಯಾಸ ಮತ್ತು ನಿರ್ದೇಶನ: ಡಾ.ಶ್ರೀಪಾದ ಭಟ್

No comments:

Post a Comment