ಕುಂದಾಪುರ ಸಮುದಾಯವು
ಪ್ರತಿ ತಿಂಗಳ ಮೊದಲ ರವಿವಾರದಂದು ಕಥಾಓದು ಕಾರ್ಯಕ್ರಮವನ್ನು ನಡೆಸುತ್ತಿದೆ.ಪ್ರತಿತಿಂಗಳೂ ಕನ್ನಡದಲ್ಲಿ
ಪ್ರಕಟಗೊಂಡಿರುವ ಒಂದು ಸಣ್ಣ ಕಥೆಯನ್ನು ಒಬ್ಬ ಅತಿಥಿ ಓದುತ್ತಾರೆ.ಓದು ಸಂಸ್ಕೃತಿಯೊಂದನ್ನು ಯುವಜನರಲ್ಲಿ
ಮೂಡಿಸುವ ಪ್ರಯತ್ನವಾಗಿ ಆರಂಭವಾದ ಈ ಕಾರ್ಯಕ್ರಮಕ್ಕೆ
ನಿಯಮಿತ ಕೇಳುಗರ ವೃಂದವೊಂದು ಸೃಷ್ಟಿಯಾಗುತ್ತಿರುವುದು ಸಂತಸದ ವಿಷಯ. ಈ ಹಿಂದಿನ
ತಿಂಗಳಲ್ಲಿ ರಂಗನಿರ್ದೇಶಕ ವಾಸುದೇವ ಗಂಗೇರ ವಸುದೇಂದ್ರರ
ನಮ್ಮಮ್ಮ ಅಂದ್ರೆ ನಂಗಿಷ್ಟ
ಎಂಬ ಪ್ರಬಂಧವನ್ನು ಓದಿದ್ದರೆ ಅದಕ್ಕೂ ಹಿಂದಿನ ತಿಂಗಳಲ್ಲಿ ುಪನ್ಯಾಸಕ ಹಾಗೂ ಹವ್ಯಾಸಿ ಯಕ್ಷಗಾನ
ಭಾಗವತರಾದ ವೆಂಕಟರಮಣ ಬಿ ತೇಜಸ್ವಿಯವರ ಮಾಯಾಮೃಗ ಕಥೆಯನ್ನು ವಾಚಿಸಿದ್ದರು.
ಈ ತಿಂಗಳು ಭಂಡಾರ್ಕರ್ಸ್ ಕಾಲೇಜಿನ ರಂಗ ಅಧ್ಯಯನ ಕೇಂದ್ರದ
ಶಿಕ್ಷಕರಾದ ವಿನಾಯಕ ರವರು ಡಾ ಶ್ರೀನಿವಾಸ ವೈದ್ಯರವೆರ
ಗಧೆ ಪಂಚವೀಸಿ ಎಂಬ ಕತೆಯನ್ನು ರಂಗತಂತ್ರಗಳ ಮೂಲಕ
ನಿರೂಪಿಸಿದರು.
No comments:
Post a Comment