ವರ್ಣಾಂಜಲಿ

ಅಪಘಾತದಿಂದಾಗಿ ನಮ್ಮನ್ನಗಲಿದ ಕಲಾವಿದ ಭೋಜುಹಾಂಡ ಒಬ್ವ ಶ್ರೇಷ್ಟ ಶಿಕ್ಷಕರಾಗಿದ್ದರು. ಸ್ವತಃ ಉತ್ತಮ ಕಲಾವಿದರಾಗಿದ್ದರೂ ತಮ್ಮ ಪ್ರತಿಭೆಯನ್ನು ಎಳೆಯ ಮಕ್ಕಳ ಸ್ರಜನಶೀಲತೆಯನ್ನು ಬೆಳಕಿಗೆ ತರುವಲ್ಲಿಯೇ ಧಾರೆಯೆರೆದ ಅವರ ನೆನಪುಗಳು ನಮ್ಮ ಮನದಾಳದಲ್ಲಿ ಸದಾ ಹಸಿರು. ಭೋಜುಹಾಂಡರಿಂದ ಸ್ಪೂರ್ತಿ ಪಡೆದು, ಕಲೆಯ ಪಟ್ಟುಗಳನ್ನು ಕಲಿತು ತಮ್ಮ ಬದುಕಿನಲ್ಲಿ ಬಣ್ಣಗಳಿಗೂ ಜಾಗ ನೀಡಿದ ಅವರ ಸಾವಿರಾರು ವಿದ್ಯಾರ್ಥಿಗಳು ನಾಡಿನ ತುಂಬಾ ಮತ್ತೆ ಮತ್ತೆ ಹಣತೆಗಳನ್ನು ಹಚ್ಛುತ್ತಾ ಭೋಜುಹಾಂಡರನ್ನು ಜೀವಂತವಾಗಿರಿಸಿದ್ದಾರೆ.
ಕುಂದಾಪುರ ಸಮುದಾಯವು ಪ್ರತಿ ಬೇಸಗೆಯಲ್ಲಿ ನಡೆಸುವ ರಂಗ ರಂಗು ರಜಾಮೇಳದಲ್ಲಿ ಭೋಜುಹಾಂಡರು ಅವಕಾಶ ವಂಚಿತರಾದ ಮಕ್ಕಳ ಕೈಗೆ ಕುಂಚ ನೀಡಿ ಕೃಥಾರ್ತರಾಗುತ್ತಿದ್ದರು. ಸಮುದಾಯದ ಜೀವಪ್ರೀತಿಯ ಕೆಲಸಗಳಲ್ಲಿ ಅವರು ಸದಾ ಜೊತೆಯಾಗುತಿದ್ದರು.
ಅವರ ನೆನಪಲ್ಲಿ ಈ ರವಿವಾರ, ಪೂರ್ವಾಹ್ನ 10ಕ್ಕೆ (19/2/2017) ಅವರು ಪ್ರತಿವಾರವೂ ತರಗತಿ ನಡೆಸುತ್ತಿದ್ದ ವಡೇರಹೋಬಳಿ ಹೈಸ್ಕೂಲಿನ ಸಭಾಭವನದಲ್ಲಿ ಜಲವರ್ಣ ಪ್ರಾತ್ಯಕ್ಷಿಕೆ ಕಾರ್ಯಕ್ರಮವಿದೆ. ಚಿತ್ರಕಲಾ ಶಿಕ್ಷಕರು ಸಮುದಾಯದ ಜೊತೆಯಲ್ಲಿ ಭೋಜುಹಾಂಡರಿಗೆ ಅರ್ಪಿಸುವ ವರ್ಣಾಂಜಲಿ ಇದು. ನೀವೂ ಜೊತೆಗೂಡಿ ಎಂಬುದು ನಮ್ಮ ಪ್ರೀತಿಯ ಒತ್ತಾಯ.
No comments:
Post a Comment